Wednesday, 26 February 2014

ನಮ್ಮ ಕುಂದಾಪುರ,



ಕುಂದಾಪುರ ತಾಲೂಕಿನ ಪ್ರಮುಖ ಪಟ್ಟಣವಾಗಿದೆ.ಇದು ಜಿಲ್ಲಾಕೇಂದ್ರವಾದ ಉಡುಪಿಯಿಂದ 35 ಕಿಲೋಮೀಟರ್ದೂರದಲ್ಲಿದೆ. ಪಶ್ಚಿಮ ದಿಕ್ಕಿನಲ್ಲಿರುವ ಸಮುದ್ರಕಿನಾರೆಯು ಕುಂದಾಪುರ ತಾಲೂಕಿನ ಪ್ರಮುಖಆಕರ್ಷಣೆಗಳಲ್ಲೊಂದು. ಈ ತಾಲೂಕಿನ ಗಂಗೊಳ್ಳಿಯಲ್ಲಿರುವಸೇತುವೆಯು ಉಡುಪಿಜಿಲ್ಲೆಯಲ್ಲೇ ಅತೀ ದೊಡ್ಡದು.ಬಡಗುತಿಟ್ಟು ಯಕ್ಷಗಾನ ಕಲೆಯನ್ನು ಬೆಳೆಸುವಲ್ಲಿ ಕುಂದಾಪುರದಪಾತ್ರ ಬಹಳ ಪ್ರಮುಖ. ಕುಂದಾಪುರದಮತ್ತೊಂದು ವಿಶೇಷವೆಂದರೆ, ಇದೊಂದು ಪರ್ಯಾಯ ದ್ವೀಪದರೂಪದಲ್ಲಿದೆ - ಉತ್ತರ, ಪಶ್ಚಿಮ ಮತ್ತು ಪೂರ್ವ ದಿಕ್ಕಿನಲ್ಲಿನೀರಿದೆ - (ಸಮುದ್ರ, ಗಂಗೊಳ್ಳಿ ಹೊಳೆ ಮತ್ತು ಹಾಲಾಡಿ ಹೊಳೆಹಾಗೂ ಕೋಣಿ ಹಿನ್ನೀರು ಪ್ರದೇಶ) ಮತ್ತು ದಕ್ಷಿಣದಲ್ಲಿ ಮಾತ್ರನೆಲವಿರುವ ಊರು. ಇಂತಹ ಒಂದು ವೈಚಿತ್ರ್ಯದ ಪ್ರಚಾರವಾಗಿಲ್ಲಮತ್ತು ಈ ನೀರಿನ ಇರವನ್ನು ಪ್ರವಾಸೋದ್ಯಮಕ್ಕೂ ಬಳಸುವಪ್ರಯತ್ನ ಹೆಚ್ಚಾಗಿ ನಡೆದಿಲ್ಲವೆಂದೇ ಹೇಳಬೇಕು. ಕುಂದಾಪುರಸಂತೆಯು ಸುತ್ತಲಿನ ನೂರಾರು ಹಳ್ಳಿಗಳ ವ್ಯಾಪಾರಕ್ಕೆಮತ್ತು 'ಕೃಷಿ ಉತ್ಪನ್ನ ಮಾರಲು' ಅನುಕೂಲಮಾಡಿಕೊಡುತ್ತಿದೆ.ಕುಂದಾಪುರ :-ಈ ಊರಿನ ಹೆಸರು 'ಪಂಚಗಂಗಾವಳಿ ತೀರ'ದಲ್ಲಿ'ಕುಂದವರ್ಮ'ನೆಂಬ ರಾಜನು ಕಟ್ಟಿಸಿದ 'ಕುಂದೇಶ್ವರ ದೇವಸ್ಥಾನ'ಮತ್ತು ಪಟ್ಟಣದಿಂದ ಬಂದಿದೆಯೆಂದು ಪ್ರತೀತಿ. ಕುಂದವರ್ಮಆಳಿದ್ದರಿಂದ, ಈ ಜಾಗವು ರಾಜನ ಹೆಸರನ್ನು ಹೊಂದಿರಬಹುದು.ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಲಿಷ್ಠರಾದ 'ಕೆಳದಿರಾಜ'ರ ಪ್ರಮುಖವಾರ ಬಂದರು ಹತ್ತಿರದ ಬಸ್ರೂರಿನಲ್ಲಿಮತ್ತು ಈ ಊರಿನಲ್ಲಿ ಇತ್ತು.ಪೋರ್ಚುಗೀಸರು 16ನೇ ಶತಮಾನದಲ್ಲಿ ಇಲ್ಲಿಗೆಬಂದು ನೆಲೆಸಿದರು ಹಾಗೂ ಒಂದು ಕೋಟೆಯನ್ನು ಕಟ್ಟಿದರು. ಆಗಸಮೀಪದ ಬಸರೂರು ಪ್ರಮುಖ ಪಟ್ಟಣವಾಗಿದ್ದು,ವ್ಯಾಪರದಂತಹಎಲ್ಲಾ ಚಟುವಟಿಕೆಗಳೂ ಬಸರೂರಿನಲ್ಲೇ ನಡೆಯುತ್ತಿತ್ತು. ನಂತರಕ್ರಮೇಣ ಬಸರೂರು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು,ಕುಂದಾಪುರ ಅಭಿವೃದ್ದಿಗೆ ಬಂತು. 1799 ರಲ್ಲಿಟೀಪು ಸುಲ್ತಾನನ ಕಾಲನಂತರ ಈಪಟ್ಟಣವನ್ನು ಬ್ರಿಟೀಷರು ವಶಪಡಿಸಿಕೊಂಡರು. ಒಂದು ಕಾಲದಲ್ಲಿಈ ಊರಿನ ಹತ್ತಿರದ ಒಂದು ಸ್ವಚ್ಚ ನೀರಿನ ಕೆರೆಯಲ್ಲಿಟೀಪು ಸುಲ್ತಾನನಿಗೆಂದೇ ಒಂದು ವಿಶೇಷ ತಳಿಯಮೀನುಗಳನ್ನು ಸಾಕಲಾಗುತ್ತಿತ್ತು. ಈ ಊರಿನ ಸುತ್ತ ಮುತ್ತಯಥೇಛ್ಛವಾಗಿ ಬೆಳೆಯುವ ಮಲ್ಲಿಗೆ (ಕುಂದ)ಹೂವಿನಿಂದಾಗಿಯೂ ಬಂದಿದೆಯೆಂದು ಹೇಳುತ್ತಾರೆ.ಇನ್ನು ಕೆಲವರು ಮನೆ ಕಟ್ಟುವ ಸಾಮಗ್ರಿಗಳಲ್ಲಿ ಒಂದಾದ ಕಂಬ
(ಕುಂದ) ಎಂಬ ಪದದಿಂದಲೂ ಬಂದಿದೆಯೆಂದು ಹೇಳುತ್ತಾರೆ.

Monday, 24 February 2014

ಕೋಟೇಶ್ವರ ಶ್ರೀ ಕ್ಷೇತ್ರ ಕೋಟೇಶ್ವರ ದೇವಸ್ಥಾನ ದ ಇತಿಹಾಸ



ಶ್ರೀ ಕೋಟಿಲಿಂಗೇಶ್ವರ ದೇವರು, ಕೋಟೇಶ್ವರ ಶ್ರೀ ಕ್ಷೇತ್ರ ಕೋಟೇಶ್ವರವು ಪರಮ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದ್ದು ಸಪ್ತ ಪವಿತ್ರ ಸಪ್ತ ಕ್ಷೇತ್ರಗಳಲ್ಲಿ ಮುಖ್ಯವಾದುದಾಗಿದೆ. ಇಲ್ಲಿ ಶ್ರೀ ಕೋಟಿಲಿಂಗೇಶ್ವರನು ನೆಲೆಸಿ ಈ ತಾಣವು ಪರಮ ಪವಿತ್ರ` ಎನಿಸಿಕೊಂಡು ಇಂದು ಜಗತ್ತಿನಲ್ಲಿ ಮೆರೆಯುತ್ತಿದೆ.'ಕೋಟೇಶ್ವರ' ವು ಪರಾತನ ಕಾಲದಿಂದಲೂ ರಾಜ-ಮಹಾರಾಜರು ಆಳಿ-ಮೆರೆದ ನಾಡು. ಐತಿಹಾಸಿಕ ಸಾಂಸ್ಕೃತಿಕ ಮತ್ತು ಎಲ್ಲಾ ರೀತಿಯಿಂದಲೂ ಗುರುತಿಸಿಕೊಂಡಿರುವ 'ಕೋಟಿಲಿಂಗನ' ಬೀಡು, ಪುರಾತನ ಕಾಲದಲ್ಲಿ 'ಧ್ವಜಪುರ' ಎಂಬ ನಾಮದಿಂದ ಪ್ರಸಿಧ್ದಿಯನ್ನು ಹೊಂದಿದ ಪರಶಿವನು ನೆಲೆಸಿ ಪಾವನಗೊಳಿಸಿದ ಭವ್ಯ ತಾಣ. ಪರಶಿವನು ಇಲ್ಲಿ ನೆಲೆಸಿರುವ ಬಗ್ಗೆ ಕೆಲವಾರು ಗ್ರಂಥ ಉಲ್ಲೇಖಗಳೂ ಕೂಡಾ ಇವೆ. ಅನಾದಿ ಕಾಲದಲ್ಲಿ 'ಕೋಟಿ ಋಷಿಗಳು' ಒಂದಾಗಿ ಈ ಪುಣ್ಯಭೂಮಿಯಲ್ಲಿ ತಪವನ್ನಾಚರಿಸಿ ಶ್ರೀ ಪರಶಿವನನ್ನು ಒಲಿಸಿಕೊಂಡಂತ ಪುಣ್ಯ ತಾಣ, 'ಕೋಟಿ ಋಷಿಗಳು' ತಪಗೈದ ಕಾರಣದಿಂದ ಈ ಪುಣ್ಯ ತಾಣದಲ್ಲಿ ಪರಶಿವನು 'ಕೋಟಿಲಿಂಗೇಶ್ವರ' ನಾಗಿ ನೆಲೆಯಾದನು ಎಂದು ಪ್ರತಿತಿ. ಪರಶಿವನು ಪಾರ್ವತಿ ಸಮೇತನಾಗಿ ಸಕಲ ದೇವಾನುದೇವತೆಗಳೊಡನೆ ನೆಲೆಸಿರುವ ಪರಮಪವಿತ್ರ ಪುಣ್ಯಸ್ಥಳವೇ ಈ ಪುಣ್ಯ ಭೂಮಿ 'ಕೋಟೇಶ್ವರ'. ಹೀಗೆ ಈ ಪುಣ್ಯಭೂಮಿಯ ಬಗ್ಗೆ ಇನ್ನೂ ಹಲವಾರು ಪ್ರತೀತಿಯೂ ಪ್ರಚಲಿತವಿದೆ. ಒಮ್ಮೆ ಸತ್ಯಯುಗದಲ್ಲಿ ಬ್ರಹ್ಮದೇವನ ತಪಸ್ಸಿಗೆ ಒಲೊದು ಮೈದೋರಿ ಈ ಭೂಮಿಯಲ್ಲಿ ನಿಂದನೆಂದು ಪ್ರತಿತಿ. ಹೀಗೆ ಬ್ರಹ್ಮದೇವ ತಪಸ್ಸನ್ನು ಆಚರಿಸಿದ ಸ್ಥಳ ದೇವಾಲಯದ ಎಡಭಾಗಕ್ಕೆ ಇರುವ ಬೃಹತ್ 'ಅಶ್ವತ್ಥ' ವೃಕ್ಷವೆಂದು ಪುರಾಣಗಳು ಸಾರುತ್ದೆ. ಅಂತೆ ಬ್ರಹ್ಮದೇವನ ಕಮಂಡಲದಿಂದ ಅಲ್ಲೇ ಪಕ್ಕದಲ್ಲೆ ಕೋಟಿ ಪುಣ್ಯವನ್ನು ನೀಡುವ 'ಕೋಟಿ ತೀರ್ಥ' ಪುಷ್ಕರಣಿಯನ್ನು ನಿಮರ್ಿಸಿದ್ದ ಎಂಬುದು ಪ್ರತಿತಿಯಿದೆ. ಹೀಗೆ ಈ ಪುಷ್ಕಕರಣಿಯನ್ನು ಪಾಂಡವರು ರಾತ್ರಿಯಲ್ಲಿ ಆರಂಭಿಸಿ ಬೆಳಗಾಗುವ ಮುನ್ನ ಮಾಡಿ ಮುಗಿಸಿದರೆಂದು ಇನ್ನೊಂದು ಉಲ್ಲೇಖವಾಗಿದೆ. ಹೀಗೆ ಈ ದೇವಾಲಯ ಪರಿಪೂರ್ಣವಾಗಿ ಬೃಹತ್ ಕಲ್ಲುಗಳಿಂದ ಮಾಡಲ್ಪಟ್ಟಿದೆ. ವಿಚಿತ್ರ, ವಿಸ್ಮಯ ರೀತಿಯಲ್ಲಿ ಬೃಹದಾಕಾರದ ಕಲ್ಲಿನಿಂದ ಈ ದೇವಾಲಯ ನಿರ್ಮಿತವಾಗಿದೆ. ಈ ದೇವಾಲಯದ ಪ್ರದಾನ ದೇವತೆಯು 'ಶ್ರೀ ಕೋಟಿಲಿಂಗೇಶ್ವರ' ನು ಪ್ರಜ್ವಲಿತ ಸೂರ್ಯನಂತೆ ಕಂಗೊಳಿಸುತ್ತಾನೆ. ದೇವನು ಇಲ್ಲಿ ಗರ್ಭಗ್ರಹದ ಮದ್ಯೆ ಪುಟ್ಟದಾದ ಬಾವಿಯಲ್ಲಿ 'ಕೋಟಿಲಿಂಗ' ದ ರೂಪದಲ್ಲಿ ನೆಲೆಸಿ ಸರ್ವರನ್ನೂ ಕಾಯುತ್ತಾ ಇದ್ದಾನೆ. ಚಿಕ್ಕಬಾವಿಯಲ್ಲಿ 'ರುದ್ರಾಕ್ಷಿ' ಯನ್ನು ಹೋಲುವ ಪುಟ್ಟ-ಪುಟ್ಟ ಲಿಂಗಗಳು ಇವೆ. ಹಾಗೇ ಇಲ್ಲಿ ಪಂಚಲೋಹದ ಪರಶಿವನ ಮೂರ್ತಿ ಈ ಕೋಟಿಲಿಂಗದ ಮೇಲಿಂದ ಭಕ್ತರಿಗೆ 'ಕೋಟಿಲಿಂಗೇಶ್ವರ' ನಾಗಿ ಕಂಗೊಳಿಸುತ್ತಾನೆ. ಹೀಗೆ ರುದ್ರಾಭಿಷೇಕ ಪ್ರಿಯ ರುದ್ರನಿಗೆ ಅನುಗಾಲವು ರುದ್ರಾಭಿಷೇಕ ನಡೆಯುತ್ತಿರುತ್ತದೆ. ಈ ಪರಮಪವಿತ್ರ ಕ್ಷೇತ್ರ ಸರ್ವದೇವತೆಗಳ ನೆಲೆವೀಡು ಆಗಿದೆ ಎಂದರೆ ತಪ್ಪಾಗಲಾರದು. ಪರಶಿವನೊಂದಿಗೆ ಆದಿಶಕ್ತಿ ರೂಪಿಣಿಯಾದ ಸರ್ವಮಂಗಳೆ ಶಿವನ ಎಡದಲ್ಲಿ ದಕ್ಷಿಣಕ್ಕೆ ಮುಖಮಾಡಿ ಕುಳಿತು ಸರ್ವರ ಅಭಿಷ್ಟವನ್ನು ಈಡೇರಿಸುತ್ತಾ ಇದ್ದಾಳೆ. ಇವಳ ಪುಟ್ಟ ವಿಗ್ರಹ ಅತೀ ಸುಂದರ ಮನೋಹರವಾಗಿದೆ. ಹೀಗೆ ಪರಶಿವನನಿಗೆ ಎಡದಲ್ಲಿ ಶಿವನಿಗೆ ಮುಖಮಾಡಿ ಬ್ರಹತ್ ನಂದಿಯು ಕುಳಿತು ಜ್ಞಾನವನ್ನು ಬೆಳಗುತ್ತಾದ್ದಾನೆ. ಪಾರ್ವತಿ ಪರಶಿವನ ಪ್ರೀತಿ ಪುತ್ರ ವಿಘ್ನನಾಶಕನಾದ ಶಿವನ ಬಲಭಾಗದಲ್ಲಿ 'ಮೂಲೆಗಣಪತಿ' ಎಂಬ ನಾಮದಿಂದ ಕ್ಷೇತ್ರದ ಕಾರಣಿಕ ಶಕ್ತಿಯಾಗಿ ನೆಲೆಸಿದ್ದಾನೆ. ಈ ದೇವ ಕಳೆದು ಹೋದ ಅಮೂಲ್ಯ ವಸ್ತುಗಳನ್ನು ಯಾವ ಮೂಲೆಯಲ್ಲಿದ್ದರೂ ಮರಳಿಕೊಡುತ್ತಾನೆ ಎಂಬುದು ಪ್ರತಿತಿ. ನಾವು ಪ್ರದಕ್ಷಿಣಾ ಪಥದಲ್ಲಿ ಸಾಗಿದಂತೆ ಮೊದಲಿಗೆ 'ಸಪ್ತಮಾತೃಕೆ' ಯರು ಒಡಗೂಡಿ ಕುಳಿತು, ಇವರೊಡನೆ ಭೂತಗಣಗಳ ನಾಯಕ 'ವೀರಭದ್ರ' ಮತ್ತು ಮಹಾಗಣಪತಿಯೂ ಕೂಡಾ ನೆಲೆಸಿದ್ದಾರೆ. ಮುಂದೆ ಹೆಜ್ಜೆಯಿಟ್ಟು ಸಾಗಿದಂತೆ ದೇವಾಲಯದ ಹಿಂಬಾಗದಲ್ಲಿ 'ಶ್ರೀ ಸುಬ್ರಹ್ಮಣ್ಯ ಸ್ವಾಮಿ' ನೆಲೆಸಿ ನಿಂದಿದ್ದಾನೆ. ಅದೇ ಪಥದಲ್ಲಿ ನಡೆದಾಗ 'ಜ್ಯೇಷ್ಠ ಲಕ್ಷ್ಮಿ' ನೆಲೆಸಿದ್ದಾಳೆ. ಮುಂದೆ ಸಾಗಿದಂತೆ 'ಮಹಿಷಾಸುರ ಮರ್ನಿದಿನಿಯು' ವಿರಾಜಮಾನಳಾಗಿ ನಿಂದಿದ್ದಾಳೆ. ಅದೇ ರೀತಿ ವೆಂಕಟರಮಣ, ತಾಂಡವೇಶ್ವರ ಕೂಡಾ ಒಳ ಪ್ರಾಕಾರಗಳಲ್ಲಿ ನೆಲೆಸಿ ನಿಂದಿದ್ದಾರೆ.ಹೊರ ಪ್ರಕಾರದಲ್ಲಿ 'ಆದಿಗಣಪತಿ', 'ಮುಖ್ಯಪ್ರಾಣ', 'ಮಹಾವಿಷ್ಣು', 'ಗೋಪಾಲಕೃಷ್ಣ' ರು ನೆಲೆಸಿ ನಿಂದು ಭಕ್ತರ ಪೊರೆಯುತ್ತಾ ನಿಂದಿದ್ದಾರೆ. ಅದೇ ರೀತಿ ಇಲ್ಲಿ ಆಕರ್ಷಣೆಗಳ್ಲಿ 'ತಟ್ಟಿರಾಯ'ಗಳು ಬಹಳ ಆಕರ್ಷಣೀಯವಾಗಿವೆ. ಇಲ್ಲಿನ ಪುಷ್ಕರಣಿಯ ಕಲ್ಲುಗಳ ಮೇಲೆ ಅನೇಕ ಪ್ರಾಣಿ-ಪಕ್ಷಿಗಳ ಕೆತ್ತನೆಗಳೂ ಕೂಡಾ ಕಂಡು ಬರುತ್ತದೆ. ಅದರಲ್ಲಿ ನವಿಲು, ಮೊಸಳೆ, ಆಮೆ ಹಾಗೆ ಶಿವಲಿಂಗವೂ ಕೂಡಾ ಇದೆ. ಶಿವಲಿಂಗ ಇರುವ ಸ್ಥಳದಲ್ಲಿ ಪುಟ್ಟ ಗುಡಿಯನ್ನು ನಿರ್ಮಿಸಿದ್ದಾರೆ. ಹಾಗೆ ಅಲ್ಲೇ ಪಕ್ಕದಲ್ಲಿ ಪ್ರಸನಃ ಗಣಪತಿಯ ಗುಡಿಯು ಇದೆ. ಇಲ್ಲಿ "ಕೊಡಿ ಹಬ್ಬದ" ದಿನ ಈ ಕೋಟಿ ತೀರ್ಥದಲ್ಲಿ ಸ್ನಾನ ಮಾಡಿ ನಂತರ ಇಲ್ಲಿ ಗಣಪತಿಯನ್ನು ಮೊದಲು ವಂದಿಸುವುದು ರೂಢಿ. ಇಲ್ಲಿ "ಕೊಡಿ ಹಬ್ಬ" ವು ಅತ್ಯಂತ ಪ್ರಸಿದ್ದವಾದ ಹಬ್ಬವಾಗಿದೆ. ಇಲ್ಲಿನ ಹಬ್ಬವು ಕಾರ್ತಿಕ ಮಾಸ ಹುಣ್ಣಿಮೆಯ ದಿನ ವಿಜೃಂಭಣೆಯಿಂದ ನಡೆಯುತ್ತದೆ. ನೀವೂ ಒಮ್ಮೆ ಈ ಪರಮ ಪವಿತ್ರ ಶ್ರೀ ಕೋಟಿಲಿಂಗೇಶ್ವರನ ಕ್ಷೇತ್ರಕ್ಕೆ ಬನ್ನಿ, ಸಕಲ ದೇವಾನುದೇವತೆಗಳ ಅನುಗ್ರಹಕ್ಕೆ ಪಾತ್ರರಾಗಿ. ಮಾರ್ಗ ವಿವರ: ಶ್ರೀ ಕ್ಷೇತ್ರಕ್ಕೆ ಉಡುಪಿಯಿಂದ ಹಲವಾರು ಬಸ್ಸಿನ ವ್ಯವಸ್ಥೆಗಳು ಇವೆ. ಉಡುಪಿಯಿಂದ ಉತ್ತರಕ್ಕೆ ಸುಮಾರು 30ಕಿ.ಮಿ ಹಾಗೂ ಕುಂದಾಪುರದಿಂದ ಸುಮಾರು 4 ಕಿ.ಮಿ ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಈ ಪರಮ ಪವಿತ್ರ ಕ್ಷೇತ್ರವಿದೆ. -

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...