Wednesday, 26 February 2014

ನಮ್ಮ ಕುಂದಾಪುರ,



ಕುಂದಾಪುರ ತಾಲೂಕಿನ ಪ್ರಮುಖ ಪಟ್ಟಣವಾಗಿದೆ.ಇದು ಜಿಲ್ಲಾಕೇಂದ್ರವಾದ ಉಡುಪಿಯಿಂದ 35 ಕಿಲೋಮೀಟರ್ದೂರದಲ್ಲಿದೆ. ಪಶ್ಚಿಮ ದಿಕ್ಕಿನಲ್ಲಿರುವ ಸಮುದ್ರಕಿನಾರೆಯು ಕುಂದಾಪುರ ತಾಲೂಕಿನ ಪ್ರಮುಖಆಕರ್ಷಣೆಗಳಲ್ಲೊಂದು. ಈ ತಾಲೂಕಿನ ಗಂಗೊಳ್ಳಿಯಲ್ಲಿರುವಸೇತುವೆಯು ಉಡುಪಿಜಿಲ್ಲೆಯಲ್ಲೇ ಅತೀ ದೊಡ್ಡದು.ಬಡಗುತಿಟ್ಟು ಯಕ್ಷಗಾನ ಕಲೆಯನ್ನು ಬೆಳೆಸುವಲ್ಲಿ ಕುಂದಾಪುರದಪಾತ್ರ ಬಹಳ ಪ್ರಮುಖ. ಕುಂದಾಪುರದಮತ್ತೊಂದು ವಿಶೇಷವೆಂದರೆ, ಇದೊಂದು ಪರ್ಯಾಯ ದ್ವೀಪದರೂಪದಲ್ಲಿದೆ - ಉತ್ತರ, ಪಶ್ಚಿಮ ಮತ್ತು ಪೂರ್ವ ದಿಕ್ಕಿನಲ್ಲಿನೀರಿದೆ - (ಸಮುದ್ರ, ಗಂಗೊಳ್ಳಿ ಹೊಳೆ ಮತ್ತು ಹಾಲಾಡಿ ಹೊಳೆಹಾಗೂ ಕೋಣಿ ಹಿನ್ನೀರು ಪ್ರದೇಶ) ಮತ್ತು ದಕ್ಷಿಣದಲ್ಲಿ ಮಾತ್ರನೆಲವಿರುವ ಊರು. ಇಂತಹ ಒಂದು ವೈಚಿತ್ರ್ಯದ ಪ್ರಚಾರವಾಗಿಲ್ಲಮತ್ತು ಈ ನೀರಿನ ಇರವನ್ನು ಪ್ರವಾಸೋದ್ಯಮಕ್ಕೂ ಬಳಸುವಪ್ರಯತ್ನ ಹೆಚ್ಚಾಗಿ ನಡೆದಿಲ್ಲವೆಂದೇ ಹೇಳಬೇಕು. ಕುಂದಾಪುರಸಂತೆಯು ಸುತ್ತಲಿನ ನೂರಾರು ಹಳ್ಳಿಗಳ ವ್ಯಾಪಾರಕ್ಕೆಮತ್ತು 'ಕೃಷಿ ಉತ್ಪನ್ನ ಮಾರಲು' ಅನುಕೂಲಮಾಡಿಕೊಡುತ್ತಿದೆ.ಕುಂದಾಪುರ :-ಈ ಊರಿನ ಹೆಸರು 'ಪಂಚಗಂಗಾವಳಿ ತೀರ'ದಲ್ಲಿ'ಕುಂದವರ್ಮ'ನೆಂಬ ರಾಜನು ಕಟ್ಟಿಸಿದ 'ಕುಂದೇಶ್ವರ ದೇವಸ್ಥಾನ'ಮತ್ತು ಪಟ್ಟಣದಿಂದ ಬಂದಿದೆಯೆಂದು ಪ್ರತೀತಿ. ಕುಂದವರ್ಮಆಳಿದ್ದರಿಂದ, ಈ ಜಾಗವು ರಾಜನ ಹೆಸರನ್ನು ಹೊಂದಿರಬಹುದು.ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಲಿಷ್ಠರಾದ 'ಕೆಳದಿರಾಜ'ರ ಪ್ರಮುಖವಾರ ಬಂದರು ಹತ್ತಿರದ ಬಸ್ರೂರಿನಲ್ಲಿಮತ್ತು ಈ ಊರಿನಲ್ಲಿ ಇತ್ತು.ಪೋರ್ಚುಗೀಸರು 16ನೇ ಶತಮಾನದಲ್ಲಿ ಇಲ್ಲಿಗೆಬಂದು ನೆಲೆಸಿದರು ಹಾಗೂ ಒಂದು ಕೋಟೆಯನ್ನು ಕಟ್ಟಿದರು. ಆಗಸಮೀಪದ ಬಸರೂರು ಪ್ರಮುಖ ಪಟ್ಟಣವಾಗಿದ್ದು,ವ್ಯಾಪರದಂತಹಎಲ್ಲಾ ಚಟುವಟಿಕೆಗಳೂ ಬಸರೂರಿನಲ್ಲೇ ನಡೆಯುತ್ತಿತ್ತು. ನಂತರಕ್ರಮೇಣ ಬಸರೂರು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು,ಕುಂದಾಪುರ ಅಭಿವೃದ್ದಿಗೆ ಬಂತು. 1799 ರಲ್ಲಿಟೀಪು ಸುಲ್ತಾನನ ಕಾಲನಂತರ ಈಪಟ್ಟಣವನ್ನು ಬ್ರಿಟೀಷರು ವಶಪಡಿಸಿಕೊಂಡರು. ಒಂದು ಕಾಲದಲ್ಲಿಈ ಊರಿನ ಹತ್ತಿರದ ಒಂದು ಸ್ವಚ್ಚ ನೀರಿನ ಕೆರೆಯಲ್ಲಿಟೀಪು ಸುಲ್ತಾನನಿಗೆಂದೇ ಒಂದು ವಿಶೇಷ ತಳಿಯಮೀನುಗಳನ್ನು ಸಾಕಲಾಗುತ್ತಿತ್ತು. ಈ ಊರಿನ ಸುತ್ತ ಮುತ್ತಯಥೇಛ್ಛವಾಗಿ ಬೆಳೆಯುವ ಮಲ್ಲಿಗೆ (ಕುಂದ)ಹೂವಿನಿಂದಾಗಿಯೂ ಬಂದಿದೆಯೆಂದು ಹೇಳುತ್ತಾರೆ.ಇನ್ನು ಕೆಲವರು ಮನೆ ಕಟ್ಟುವ ಸಾಮಗ್ರಿಗಳಲ್ಲಿ ಒಂದಾದ ಕಂಬ
(ಕುಂದ) ಎಂಬ ಪದದಿಂದಲೂ ಬಂದಿದೆಯೆಂದು ಹೇಳುತ್ತಾರೆ.

No comments:

Post a Comment

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...