Sunday, 27 April 2014

ಹಿಂದಿ ಮಾಷ್ಟ್ರೆ ನಂಗೆ ಸ್ಫೂರ್ತಿ !


ಯಾವುದೇ ಒಂದು ಯಶಸ್ಸಿನ ಹಿಂದೆ ಪ್ರೋತ್ಸಾಹದ ಪ್ರಭಾವ ಇದ್ದೆ ಇರುತ್ತದೆ ಒಂದು ಕಾರ್ಯದ ಸುಕ್ಸಸ್ ಗೆ  ಗುರಿ ಮತ್ತು ಗುರಿಯೇ ಮುಖ್ಯ ಎನ್ನುವುದು ಬಲ್ಲವರ ಅಭಿಪ್ರಾಯ .ನಿಜಕ್ಕೂ ಈ ಮಾತು ವಾಸ್ತವದ ವಿಚಾರವೂ ಹೌದು .ಬಹುಶ: ನನ್ನಸಾಹಿತ್ಯ ಪ್ರೇಮಕ್ಕೆ ಈ ಅಕ್ಷರ ಬಯಕೆಯ ಬರವಣಿಗೆಗೆ ಸ್ಫೂರ್ತಿ ಎಂದರೆ ನಮ್ಮ ಹಿಂದಿ ಮಾಷ್ಟ್ರ್ ಅಂತಲೇ ಹೇಳಬಹುದು .ಅವರ ಹೆಸರು ಬಸವರಾಜ್  ಎಂದಿದ್ದರೂ ,ಈಡೀ ನಮ್ಮ ಸಂಸ್ಥೆಗೆ ಅವರೇ ಹಿಂದಿ ವಿಷಯದ ಉಪನ್ಯಾಸಕರಾಗಿದ್ದರಿಂದ ಎಲ್ಲೆಲ್ಲೂ ಹಿಂದಿ ಮಾಷ್ಟ್ರ್ ಎಂದೇ ಜನ ಜನಿತ .ಆಗ ನಮಗೆ 9 ನೇ ತರಗತಿ . ನಮ್ಮ ಕ್ಲಾಸ್ ಟೇಚರ್ ಕೂಡ ಇವರೇ ಆಗಿದ್ದರು .ಉತ್ತಮ ವಾಗ್ಮಿ ,ಹಿತ ಮಿತ ,ಎಲ್ಲರಿಗೂ ಆರ್ಥವಾಗುವ ಮುತ್ತಿನ,ಮಾಣಿಕ್ಯದಂಥ ಮಾತು .ಹಸನ್ಮುಖಿ ಮುಖಭಾವ .
ಶಿವಕುಮಾರ್ ಹೊಸಂಗಡಿ
 ಪಠ್ಯತ್ತರ ಜೊತೆ ಆಟೋಟ ,ಸಾಂಸ್ಕ್ರತಿಕ  ಕಾರ್ಯಕ್ರಮ ಎಲ್ಲವೂ, ಎಲ್ಲಾ ವಿಧ್ಯಾಸಂಸ್ಥೆಗಳಲ್ಲಿ ಇದೆಯೋ ಇಲ್ವೋ ಗೊತ್ತಿಲ್ಲ  ಆದರೆ ನಮ್ಮ ಪ್ರೌಢ ಶಾಲೆಯಲ್ಲಿ ಇದು ಬಹಳ ಕಟ್ಟು ನಿಟ್ಟಾಗಿ ಪಾಲಿಸುತ್ತಾ ಬಂದಿತ್ತು .ಹಾಗಾಗಿಯೋ ಏನೋ ಪ್ರತಿ ವರ್ಷ ಕ್ರೀಡಾ ಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರೇ, ಸಾಂಸ್ಕ್ರತಿಕ ಚಟುವಟಿಕೆಯಲ್ಲಿ ' ಪ್ರತಿಭಾ ಕಾರಂಜಿ' ಕಾರ್ಯಕ್ರಮದ ಮೂಲಕ  ಗುರುತಿಸಿ ಕೊಂಡಿದೆ . ಅದೇನೇ ಇರಲಿ  ಕ್ರೀಡಾ ಕೂಟದಲ್ಲಿ ನಾನು ಬಹಳಷ್ಟು ಹಿಂದೆ ..ಸಾಂಸ್ಕ್ರತಿಕ ಚಟುವಟಿಕೆ ಗಂತೂ ಇಲ್ಲವೇ  ಇಲ್ಲ !.ವಿಧ್ಯಾಭ್ಯಾಸದ ಬಗ್ಗೆ 6 ಕ್ಕೆ ಇರಲಿಲ್ಲ ..3ರಕ್ಕೆ ಇಳಿಯಲಿಲ್ಲ  ಇಂಥಹ ದೈನಂದಿನ ಚಟುವಟಿಕೆಯಲ್ಲಿ ನನ್ನ ಶಾಲಾ ಜೀವನ ಸಾಗುತಿತ್ತು .ಕ್ರೀಡೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಲೇ ಬೇಕೆಂಬ ಕಟ್ಟಪ್ಪಣೆ  ನಮ್ಮ ದೈಹಿಕ ಶಿಕ್ಷಕರಲ್ಲಿ  ಇರಲಿಲ್ಲ .ಇದರಲ್ಲಿ ಇಂಟ್ರೆಷ್ಟ್ ಇದ್ದವರಿಗೆ ,ಅಂತಹ ಪ್ರತಿಭೆಗಳಿಗೆ ತರಭೇತಿ ನೀಡುವಲ್ಲಿ ಸಕ್ರಿಯರಾಗುತ್ತಿದ್ದರು .ಆದರೆ ವಾರಕ್ಕೆ ಒಮ್ಮೆ ಶುಕ್ರವಾರ ಮಧ್ಯಾಹ್ನದ ಕೊನೆ ಪಿರಿಡ್ C .A (Cultural Activities ) ಎಂದಾಗಿತ್ತು .ಈ ಸಾಂಸ್ಕ್ರತಿಕ ಕಾರ್ಯಕ್ರಮದ ಪಿರಿಡ್ ನ ದಿನ ಖಡಾ ಖಂಡಿತವಾಗಿ ಎಲ್ಲಾ ವಿಧ್ಯಾರ್ಥಿಗಳು ಭಾಗವಹಿಸಲೇ ಬೇಕಿತ್ತು .ಈ ಕಾನೂನು ಉಳಿದ ಎಲ್ಲಾ ತರಗತಿಗಳಿಗೂ ಇಲ್ಲದೆ ಇದ್ದರೂ ನಮ್ಮ ಕ್ಲಾಸ್  ಅವಶ್ಯವಾಗಿ ಪಾಲಿಸಲೇ ಬೇಕಿತ್ತು .ಇದು ನಮ್ಮ ಕ್ಲಾಸ್ ಟೇಚರ್ ಆದ ಹಿಂದಿ ಮಾಷ್ಟ್ರ್ ರರ  ಕಟ್ಟಾಜ್ಞೆ !  ಆ ಒಂದು ಸಂದಿಗ್ನ ಪರಿಸ್ತಿತಿಗೆ ನಾನು ಸಾಹಿತ್ಯದ ಮೊರೆ ಹೋಗಲೇ ಬೇಕಾಯಿತು .ಲೇಖನಿಯನ್ನು ಆ ವಿಷಯಕ್ಕೂ ಪ್ರಹರಿಸಬೇಕಾದ ಪ್ರಸಂಗ ,ಬಯಸದೆ ಬಂದ ಬಾಗ್ಯವಾಯಿತು .ಮನಸಿಗೆ ಬಂದ ಪುಟ್ಟ -ಪುಟ್ಟ ನಗೆ ಹನಿಯನ್ನು ಬರೆದು ಪ್ರಹಸ ಮಾಡವುದು ಕಲಿತು ಕೊಂಡೆ .ಆ ದಿನದ ಆ ಪೀರಿಡ್ ನಲ್ಲಿ ಸಾಂಸ್ಕ್ರತಿಕ ವಿಚಾರಕ್ಕೆ ಸಂಬಂದಿಸಿದ ವಿಚಾರಗಳ ಬಗ್ಗೆ ಚರ್ಚೆ ,ಪ್ರಶ್ನೆ ,ಸಂದರ್ಶನ ,ಬೋಧನೆ ನಮ್ಮ ಹಿಂದಿ ಮಾಷ್ಟ್ರ್ ಇಂದ ನಡೆಯಲ್ಪಡುತ್ತಿತ್ತು.ಒಂದು ದಿನ ''  'ಚುಟುಕುಗಳ ಬ್ರಹ್ಮ' ಕವಿ  ದಿನಕರ್ ದೇಸಾಯಿ ಬರಹ ಹೋಲುವಂತ  ಕವನಗಳನ್ನು  ಎಲ್ಲರೂ ಬರೆದು ಪ್ರಸ್ತಾವಿಸಬೇಕು ಮುಂದಿನ ca ಪೀರಿಡ್ ಗೆ'' .ಎಂಬ ಕಟ್ಟಾಜ್ಞೆ ಗೆ ನಾನು 6 ಕವಿತೆಯನ್ನು ಬರೆದು ವಾಚಿಸಿದ್ದೂ , ಹಿಂದಿ ಮಾಷ್ಟ್ರ್ ಪ್ರಶಾಮ್ಸಿದ್ದೂ, ಇನ್ನಷ್ಟು ಬರೆಯಲು ಇಂಬು ನೀಡಿದ್ದೂ ,ಸಹಪಾಠಿಗಳು ಸಹಕರಿಸಿದ್ದು ಎಲ್ಲವೂ ಇತಿಹಾಸವಾದರೂ ನನ್ನ ಮುಂದಿನ ಕೆಲ ಪುರಸೋತ್ತಿನ ಬರಹಕ್ಕೆ ಸಾಕ್ಷಿಯಾಗಿತ್ತು . ಹೀಗೆ ಬರವಣಿಗೆಯೇ ಹವ್ಯಾಸ ಹಬ್ಬಿ ಕೊಂಡಿತ್ತು .ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವಾರಕ್ಕೊಂದು ವಿಷಯಕ್ಕೆ ನಿಮ್ಮ ಅಭಿಪ್ರಾಯದ ಟಿಪ್ಪಣಿಯನ್ನು ಬರೆದು ಕಳಿಸಿ ಎಂದು ಬೆನ್ನು ತಟ್ಟಿ ಎಚ್ಚರಿಸಿ ಉಪಚರಿಸುತ್ತಿದ್ದ ಸರ್ ರ ಮಾತಿಗೆ ಬೆಲೆ ಕೊಟ್ಟು ,ಪಠ್ಯದ ಜೊತೆ ಇದನ್ನು ಅಳವಡಿಸಿ ನಿರಂತರ ಸಾಹಿತ್ಯ ಪ್ರೇಮಕ್ಕೆ ದಾಸನಾದೆ .ಇದು ಸಾಧ್ಯವಾಗಿದ್ದು ನಿಜಕ್ಕೂ ಪ್ರೀತಿಯ ಹಿಂದಿ ಮಾಷ್ಟ್ರ್ ಯಿಂದಲೇ ಅನ್ನಲಿಕ್ಕೆ ಹೆಮ್ಮೆ ಅನ್ನಿಸುತ್ತದೆ .ಪ್ರತಿಯೊಬ್ಬರ ಮನದಲ್ಲಿ ಅವಿತಿರುವ ಪ್ರತಿಭಾ ಭೂತವನ್ನು ಹೊರಕ್ಕೆ ಎಬ್ಬಿಸುವ ಇವರ ಈ ಸಾಹಿತ್ಯ ಶ್ರಮದಾಯಕ ಸಾಹಸದಿಂದ ಅದೆಷ್ಟೋ ವಿಧ್ಯಾರ್ಥಿಗಳು ಲೇಖಕರಾಗಿ ಹೊರ ಹೊಮ್ಮಿದ್ದಾರೆ . ಇವರರನ್ನು ಮಿಸ್ ಮಾಡಿಕೊಳ್ಳುತ್ತದ್ದರೂ ,ಬರೆಯುವ ಅಕ್ಷರದಲ್ಲಿ ನೆರಳಾಗುತ್ತಾರೆ . ಇದೀಗ ಒಂದೆಡೆ ಓದು ಇನ್ನೊಂದೆಡೆ ಉದ್ಯೋಗದಲ್ಲಿ ಬ್ಯುಸಿಯಾಗಿರುವ ನನಗೆ ಸಮಯವನ್ನು ಸರಿದೂಗಿಸಿಕೊಂಡು ಕೆಲ ಪತ್ರಿಕೆ ಗಳಲ್ಲಿ ಅಭಿವ್ಯಕ್ತಿಯನ್ನು ಹಂಚಿ ಕೊಳ್ಳುದರ ಜೊತೆಗೆ ಬ್ಲಾಗ್ ನಲ್ಲಿ ಬರೆಯುವ ಹವ್ಯಾಸ ತೆರೆ ಮರೆಯಲ್ಲಿ ನಡೆಯುತ್ತಿದೆ .ಬರೆಯುವ ಮನಸಿದ್ದರೂ ,ಸಮಯದ ಒತ್ತಡ ಹೆಗಲೇರಿ ಕುಳಿತಿದೆ .
-ಶಿವಕುಮಾರ್ ಹೊಸಂಗಡಿ


No comments:

Post a Comment

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...