ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವಒಟ್ಟು 34,217 ದೇವಸ್ಥಾನಗಳಿವೆ. ಅವುಗಳಲ್ಲಿಆದಾಯ ಗಳಿಕೆಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮೊದಲವಾರ್ಷಿಕ ಆದಾಯ 44.8225 ಕೋಟಿ ರೂ.ಬೇರೆಮುಜರಾಯಿ ದೇವಸ್ಥಾನಗಳಿಗೆ ಹೋಲಿಸಿದರೆಬರುವ ಭಕ್ತರ ಸಂಖ್ಯೆಯೂ ಅತ್ಯಧಿಕ.
'ದೇವಸ್ಥಾನಕ್ಕೆ ಪ್ರತಿದಿನ ಅಂದಾಜು 2ರಿಂದ 5ಸಾವಿರ ಭಕ್ತರು ದರ್ಶನಕ್ಕೆ ಬರುತ್ತಾರೆ. ಇಲ್ಲಿಸೇವೆ ಮತ್ತು ಹುಂಡಿ ರೂಪದಲ್ಲಿ ಹೆಚ್ಚಿನ ಹಣಸಂಗ್ರಹವಾಗುತ್ತಿದೆ. ತಿಂಗಳಿಗೆಅಂದಾಜು 50ರಿಂದ 60 ಲಕ್ಷ ರೂ. ಕಾಣಿಕೆಬರುತ್ತದೆ' ಇನ್ನು ರಾಜ್ಯದ2ನೇ ಶ್ರೀಮಂತ ಪುಣ್ಯಕ್ಷೇತ್ರಕೊಳ್ಳೆಗಾಲದ ಮಲೆ ಮಹದೇಶ್ವರ ಸ್ವಾಮಿ. ಈಕ್ಷೇತ್ರದ ಆದಾಯ 26.5021 ಕೋಟಿ ರೂ.ಶ್ರೀಮಂತಿಕೆಯಲ್ಲಿ 3ನೇ ಸ್ಥಾನದಲ್ಲಿರುವಮುಜರಾಯಿ ದೇವಸ್ಥಾನ ಕುಂದಾಪುರದಶ್ರೀ ಕೊಲ್ಲೂರು ಮೂಕಾಂಬಿಕೆ.
ಒಟ್ಟು ಸಂಪಾದನೆ 10.0874 ಕೋಟಿ ರೂ.ಹಾಗೆಯೇ 6ನೇ ಶ್ರೀಮಂತ ದೇವಳನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿದೇವಸ್ಥಾನ. ಈ ಪುಣ್ಯಕ್ಷೇತ್ರದ ಆದಾಯ9.8060 ಕೋಟಿ ರೂ. ಆ ಬಳಿಕ
7ನೇ ಕೋಟಾಧಿಪತಿ ಕ್ಷೇತ್ರ ಸವದತ್ತಿಯಯಲ್ಲಮ್ಮನಗುಡ್ಡ ಶ್ರೀ ರೇಣುಕ ಯಲ್ಲಮ್ಮದೇವಸ್ಥಾನ. ಈ ದೇವಸ್ಥಾನ ಸಂಪಾದನೆ7.89,80 ಕೋಟಿ ರೂ.ನಂತರದ ಸ್ಥಾನದಲ್ಲಿಉಡುಪಿ ಮಂದರ್ತಿಯ ಶ್ರೀ ದುರ್ಗಾ ಪರಮೇಶ್ವರಿದೇವಸ್ಥಾನವಿದೆ. ಇದರ ಆದಾಯ 3.8170ಕೋಟಿ ರೂ.ಇನ್ನು 3.73,39 ಕೋಟಿ ರೂ.
ಆದಾಯದೊಂದಿಗೆ ಬೆಂಗಳೂರಿನ ಶ್ರೀ ಬನಶಂಕರಿದೇವಸ್ಥಾನ 9ನೇ ಸ್ಥಾನದಲ್ಲಿದೆ.
ಕೊನೆಯದಾಗಿ ಕೊಪ್ಪಳದ ಶ್ರೀ ಹುಲಿಗಮ್ಮದೇವಸ್ಥಾನ 1.76,87 ಕೋಟಿಸಂಪಾದನೆಯೊಂದಿಗೆ 10ನೇ ಸ್ಥಾನದಲ್ಲಿದೆ.ಈಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಇಲಾಖೆಆಯುಕ್ತ ಬಿ.ಎನ್. ಕೃಷ್ಣಯ್ಯ 'ರಾಜ್ಯದಲ್ಲಿಒಟ್ಟು 34 ಸಾವಿರಕ್ಕೂ ಹೆಚ್ಚು ಮುಜರಾಯಿದೇವಸ್ಥಾನಗಳಿವೆ. ಆದಾಯ ಗಳಿಕೆಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮೊದಲಸ್ಥಾನದಲ್ಲಿದೆ. ಆಯಾ ದೇವಸ್ಥಾನಗಳಆದಾಯ ಗಳಿಕೆ ಮೇಲೆಅವುಗಳನ್ನು ವರ್ಗೀಕರಿಸಲಾಗಿವೆ'ಎಂದು ಹೇಳಿದ್ದಾರೆ.'25 ಲಕ್ಷ ರೂ.ಮತ್ತು ಅದಕ್ಕಿಂತ ಹೆಚ್ಚಿನ ಆದಾಯವಿರುವದೇವಸ್ಥಾನಗಳನ್ನು 'ಎ' ಪಟ್ಟಿಗೆ ಸೇರಿಸಿದ್ದು,ಅಂತಹ 110 ದೇವಸ್ಥಾನಗಳಿವೆ.ಹಾಗೆಯೇ 5ರಿಂದ 25 ಲಕ್ಷ ರೂ. ಆದಾಯ ಗಳಿಕೆಪುಣ್ಯಕ್ಷೇತ್ರಗಳನ್ನು 'ಬಿ'ಪಟ್ಟಿಗೆ ಸೇರಿಸಿದ್ದು,ಅಂತಹ 175 ದೇವಸ್ಥಾನಗಳಿಗೆ. 5 ಲಕ್ಷಕ್ಕಿಂತಕಡಿಮೆ ಆದಾಯ ಬರುವ ದೇವಸ್ಥಾನಗಳನ್ನು 'ಸಿ'ವಿಭಾಗಕ್ಕೆ ಸೇರಿಸಿದ್ದು, ಅವು ಒಟ್ಟು 33,932ದೇವಸ್ಥಾನಗಳಿಗೆ'ಎಂದು ಆಯುಕ್ತರು ತಿಳಿಸಿದ್ದಾರೆ.ಟಾಪ್ 10ರಲ್ಲಿ ಕರಾವಳಿ 4 ಪುಣ್ಯಕ್ಷೇತ್ರರಾಜ್ಯದ 10 ಶ್ರೀಮಂತ ದೇವಸ್ಥಾನಗಳಪಟ್ಟಿಯಲ್ಲಿ ಕರಾವಳಿ ಭಾಗದ ಒಟ್ಟು 4ದೇವಸ್ಥಾನಗಳಿವೆ. ಅಂದರೆ ಧಾರ್ಮಿಕವಾಗಿಅತಿಹೆಚ್ಚು ಆದಾಯ ಬರುವ ದೇವಸ್ಥಾನ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿವೆ.ಇನ್ನು ಖಾಸಗಿ ಒಡೆತನದಲ್ಲಿರುವದೇವಸ್ಥಾನಗಳಿಗೆ ಹೋಲಿಸಿದರೂ ಧರ್ಮಸ್ಥಳದ
ಶ್ರೀ ಮಂಜುನಾಥೇಶ್ವರ ಕೂಡ ರಾಜ್ಯದಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿಒಂದು. ಹೀಗಾಗಿ, ಕರ್ನಾಟಕದಲ್ಲಿಅತಿಹೆಚ್ಚು ಭಕ್ತಾದಿಗಳು ಈ ಎರಡು ಜಿಲ್ಲೆಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.
-ಸಂಗ್ರಹ

No comments:
Post a Comment