Sunday, 12 July 2020
'ರಂಗಸ್ಥಳಂ'ಎಂಬ ಸಿನಿಮಾದ ಸುತ್ತಾ.....
ಇತ್ತೀಚೆಗೆ ನನಗೆ ಹಿಡಿಸಿದ ಚಲನಚಿತ್ರ ಅಂದರೆ ಅದು ತೆಲುಗಿನ ರಾಮ್ ಚರಣ್ ಮತ್ತು ಸಮಂತಾ ಅಭಿನಯದ ,ಸುಕುಮಾರ್ ನಿರ್ದೇಶನದ 2018ರಲ್ಲಿ ತೆರೆಕಂಡ ರಂಗಸ್ಥಳಂ. ಹೆಸರು ಸ್ವಲ್ಪ ವಿಚಿತ್ರಕಾರಿಯಾಗಿ ಕಂಡರೂ, ರಂಗಸ್ಥಳ ಎಂಬುದು ಒಂದು ಊರಿನ (ಹಳ್ಳಿ)ಹೆಸರು.ತೀರ 15 ರಿಂದ 20 ವರ್ಷಕ್ಕೂ ಹಳೆಯ ಹಳ್ಳಿಯ ನೈಜ ಸ್ಠಿತಿಯನ್ನು ಕಣ್ಮುಂದೆ ತರುವಂತಹ ಅಧ್ಭುತ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾ . ಸುಮಾರು 2 ಗಂಟೆ 40 ನಿಮಿಷದ ಚಿತ್ರವಾದರೂ, ಎಲ್ಲೂ ಕೂಡಾ ಉದ್ದ ಚಿತ್ರ ಎಂಬ ಭಾವನೆಯನ್ನು ಹುಟ್ಟೀಸುವುದೇ ಇಲ್ಲ. ಹಾಗೆ ಎಲ್ಲೂ ಬೊರ್ ಹೊಡಿಸದಂತೆ ನಿರ್ದೇಶಕರು ಚಿತ್ರಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ನಾಯಕ ರಾಮ್ ಚರಣ್ (ಚಿಟ್ಟಿ ಬಾಬು ),ಸುಮಂತಾ (ರಾಮ ಲಕ್ಷ್ಮಿ) ಹಳ್ಳಿಸೊಗಡಿಗೆ ಎಲ್ಲೂ ಕಳಂಕಬಾರದಂತೆ ಅಮೊಘವಾಗಿ ನಟಿಸಿದ್ದಾರೆ. ಎಂದಿನಂತೆ ವಿಲನ್ ಆಗಿ ಜಗಪತಿ ಬಾಬು ( ಫಣಿಂದ್ರ ಭೂಪತಿ,)ಆಕ್ಟಿಂಗ್ ಸೂಪರ್.ನಾಯಕ ಅಣ್ಣನಾಗಿ ಆಧಿ ಪಿಣಿಸೆಟ್ಟಿ (ಕುಮಾರ್) ತಮ್ಮ ಪಾತ್ರ ಜೀವ ತುಂಬಿದ್ದಾರೆ.
ಆ ರಂಗಸ್ಥಳ ಎಂಬ ಹಳ್ಳಿಗೆ ,ಜಗಪತಿ ಬಾಬು(ಫಣಿಂದ್ರ ಭೂಪತಿ)ಆತನೇ ಪ್ರೇಸೆಡೆಂಟ್ .ಆತ ಹೇಳಿದಂತೆ ಊರವರು ನಡೆದುಕೊಳ್ಳಬೇಕು. ಆತನ ಕ್ರೂರ,ದೌರ್ಜನ್ಯ ರಹಿತ ಆಡಳಿತ ವ್ಯವಸ್ಥೆಗೆ ಜನರು ರೋಸಿ ಹೋದರೂ, ಆತನ ಎದುರು ಮಾತನಾಡಲು ಭಯ ನಮಗೆ ,ಕುಟುಂಬ ಸದಸ್ಯರಿಗೆ ತೊಂದರೆ ಮಾಡುತ್ತಾನೋ ಎಂಬ ಅಸಹಾಯಕತೆ. ತೀರ ಬೇಸತ್ತ ಕೆಲವು ಧೈರ್ಯವಂತರು ಪ್ರೇಸಿಡೆಂಟ್ ಚುನಾವಣೆಗೆ ಸ್ಪರ್ಧಿಸಿದರೇ, ತನ್ನ ಪವರ್ ಮೂಲಕ ಯಾರಿಗೂ ಗೊತ್ತಾಗದಂತೆ ಅವರನ್ನು ಮುಗಿಸಿಬಿಡುವ ಚಾಲಾಕಿತನ ಆತನಲ್ಲಿ ಇತ್ತು , ನಾಯಕ ಚಿಟ್ಟಿ ಬಾಬುಗೆ ನಿಧಾನವಾಗಿ ಹೇಳಿದರೇ ಕಿವಿ ಕೇಳಿಸದು . ಆತನ ಅಣ್ಣ ಆಧಿ ಪಿಣಿಸೆಟ್ಟಿ (ಕುಮಾರ್).ದುಬೈ ಯಿಂದ ಬಂದ ನಾಯಕನ ಅಣ್ಣ ಫಣಿಂದ್ರ ಭೂಪತಿ ಉಪಟಳವನ್ನು ತಾಳಲಾರದೇ ತಾನೇ ಪ್ರೇಸಿಡೆಂಟ್ ಚುನಾವಣೆಗೆ ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯದಲ್ಲಿರುತ್ತಾನೆ ಇನ್ನೇನು ಬೆರಳಣಿಕೆ ದಿನಗಳಲ್ಲಿದ್ದ ಒಂದು ದಿನ ರಾತ್ರಿ ಫಣಿಂದ್ರ ಭೂಪತಿ, ಕಡೇಯುವರು ಅಟೆಕ್ ಮಾಡುತ್ತಾರೆ,ಸರಿಯಾದ ಸಮಯ ಹೀರೊ ಎಂಟ್ರಿಯಾದುದರಿಂದ ಸಾವಿನ ದವಡೆ ಯಿಂದ ಆ ಸಮಯದಲ್ಲಿ ಪಾರಾದರೂ, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಣ್ಣನನ್ನು ಎತ್ತಿಕೊಂಡು ಹಾದಿಯಲ್ಲಿ ಕಂಡ ಅಜ್ಜಿ ಅಂಗಡಿಯಲ್ಲಿ ಪೂರ್ತಿ ಗಾಯಗೊಂಡ ಅಣ್ಣನಿಗೆ ಗಾಯಕ್ಕೆ ಅರಿಶಿಣ ಪುಡಿ ತರಲು ಹೋದಾಗ,ಇತ್ತ ಅಣ್ಣನಿಗೆ ಕತ್ತಿಯಿಂದ ಕುತ್ತಿಗೆ ಬೀಸಿ ಅನಾಮಿಕನೊಬ್ಬ ಪಾರಾಗುತ್ತಾನೆ. ಉಸಿರು ಬಿಡುವ ಮುನ್ನಾ ತಾನು ಸಾಯುವುದಕ್ಕೆ ಕಾರಣನಾದ ವಿಲನ್ ಬಗ್ಗೆ ಸುಳಿವು ಕೊಟ್ಟರೂ, ಕಿವಿ ಕೇಳಿಸಿದ ತಮ್ಮ ಹೀರೋಗೆ ಅರ್ಥವಾಗುವುದಿಲ್ಲ ,ಇತ್ತ ಪರಾರಿಯಾದ ಖಳ ನಾಯಕ ಫಣಿಂದ್ರ ಭೂಪತಿಯನ್ನು ಪತ್ತೆ ಹಚ್ಚಿ ಸಾಯಿಸುತ್ತಾನೆ. ಅಣ್ಣನ ಸಾವಿಗೆ ಕಾರಣವಾದ ವ್ಯಕ್ತಿಯನ್ನು ಪತ್ತೆ ಹಚ್ಚುತ್ತಾನೆ ,ತಮ್ಮ ಜೊತೆಗೆ ಉತ್ತಮವ ಒಡನಾಟ ಬೆಳೆಸಿದ್ದ ಎಂ.ಎಲ್.ಎ ಅನ್ನುವುದಕ್ಕೆ ಹೆಚ್ಚಿನ ಸಮಯ ಬೇಕಾಗಿರುವುದಿಲ್ಲ. ಅದೇ ಕ್ಷಣ ಆ ಎಂ.ಎಲ್.ಗೆ ರಸ್ತೆ ಅಪಘಾತವಾಗುತ್ತದೆ. ಸತ್ತೇ ಹೋಗುತ್ತಿದ್ದ ಎಂ.ಎಲ್ ಎ ಪ್ರಕಾಶ್ ರಾಜ್ (ದಕ್ಷಿಣ ಮೂರ್ತಿ)ಯನ್ನು ಹೇಗೋ ಬದುಕಿಸಿ,ಎರಡು ವರ್ಷಗಳ ಕಾಲ ಆರೈಕೆ ಮಾಡಿ ಪೂರ್ಣ ಗುಣಮುಖನಾದ ಮೇಲೆ ಮೀಟ್ ಮಾಡುತ್ತಾನೆ., "ನಿನ್ನ ಅಣ್ಣ ತನ್ನ ಮಗಳನ್ನು ಲವ್ ಮಾಡುತ್ತಿದ್ದ ,ನೀವುಗಳು ನನ್ನ ಪ್ರೆಷ್ಟೀಜ್ಗೆ ಯಾವ ತರಹದಲ್ಲೂ ಸರಿಸಮಾನರಲ್ಲ ಅದೇ ಕಾರಣದಿಂದ ಕೊಲೆ ಮಾಡಿಸಿದ್ದು ಎಂದು ಒಪ್ಪಿಕೊಳ್ಳುತ್ತಾನೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸು ಎಂದು ಆತನ ಕತ್ತಿಗೆ, ಕತ್ತಿ ಇಟ್ಟು ಮನೆಕಡೆ ಧಾವಿಸುತ್ತಾನೆ ಕಥಾನಾಯಕ . ಬೆಷ್ಟ್ ಯಾಕ್ಟರ್,ಬೆಷ್ಟ್ ಆಡಿಯೋ ಗ್ರಾಫಿ, ಬೆಷ್ಟ್ ಸಪೋರ್ಟಿಂಗ್ ಯಾಕ್ಟರ್,ಬೆಷ್ಟ್ ಸಿನಿಮಾಟೋಗ್ರಾಫರ್,ಬೆಷ್ಟ್ ಮ್ಯೂಸಿಕ್ ಡೈರೆಕ್ಟರ್, ಎಂಬ ಐದು ಫಿಲ್ಮ್ ಫೇರ್ ಅವಾರ್ಡ್ ಸಿಕ್ಕಿದೆ. ನಿಜಕ್ಕೂ ನೈಜ ಘಟನೆಗೆ ಹಿಡಿದ ಕನ್ನಡಿ ಈ ಚಿತ್ರ. ನಿರ್ದೇಶಕರು ,ಚಿತ್ರವನ್ನು ನಿಗೊಡತೆಯಲ್ಲಿ ನಿರೂಪಿಸಿದ ರೀತಿ ಅದ್ಬುತ ,ಆದಿ ಯಿಂದ ಅಂತ್ಯದವರೆಗೆ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕುಳ್ಳರಿಸಿ ನೋಡಿಸಿ ಕೊಂಡು ಹೋಗುವ ರೀತಿ ವಿಷೇಶವದದ್ದು.
Subscribe to:
Post Comments (Atom)
ದುಬೈಯ ಗ್ಲೋಬಲ್ ವಿಲೇಜ್ !
ಯು.ಎ.ಇ(ಅರಬ್ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...
-
ಶ್ರೀ ಕೋಟಿಲಿಂಗೇಶ್ವರ ದೇವರು , ಕೋಟೇಶ್ವರ ಶ್ರೀ ಕ್ಷೇತ್ರ ಕೋಟೇಶ್ವರವು ಪರಮ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದ್ದು ಸಪ್ತ ಪವಿತ್ರ ಸಪ್ತ ಕ್ಷೇತ್ರಗಳಲ್ಲಿ ಮುಖ್...
-
ಕರಾವಳಿ ಜಿಲ್ಲೆ ಜಾನಪದ ಕಲೆ ಹಾಗೂ ಜಾನಪದ ಕ್ರೀಡೆಗಳ ತವರೂರು ಎಂದೇ ಹೇಳಬಹುದು. ಭೂತಕೋಲ, ಯಕ್ಷಗಾನ, ಹುಲಿ ಕುಣಿತ, ಮೊದಲಾದವುಗಳು ಇಲ್ಲಿನ ಜಾನಪದ ಕಲೆಗಳಾದರೆ, ಕಂಬಳ,...
-
ಚಹಾ, ಕಾಫಿಗಳಲ್ಲಿ ಹತ್ತು ವಿಧದ ವಿಷಗಳಿರುತ್ತವೆ. ೧. ‘ಟ್ಯಾನಿನ್’ ಎಂಬ ವಿಷವು ಶೇ.೧೮ರಷ್ಟಿರುತ್ತದೆ. ಇದು ಹೊಟ್ಟೆಯಲ್ಲಿ ಛಿದ್ರಗಳನ್ನು ಮತ್ತು ವಾಯುವನ್ನು ನಿರ...

No comments:
Post a Comment