Tuesday, 7 July 2020

ಪವಾಡ ಪುರುಷ ಪುರಿ ಜಗನ್ನಾಥ

ಕ್ರೂರಿ ಕೊರೊನಾದ ಹಾವಳಿಯಿಂದ ಎಲ್ಲಾ ಕಾರ್ಯಕ್ರಮಗಳಿಗೂ ದೊಡ್ಡ ಹೊಡೆತ ಬಿದ್ದಿತು.ಧಾರ್ಮಿಕ ಕಾರ್ಯಕ್ರಮಗಳು ಸಹಾ ಇದಕ್ಕೆ ಹೊರತಾಗಿಲ್ಲ ,ಹೇಳಿ ಕೇಳಿ ಇದೀಗ ಉತ್ಸವದ ಸಮಯ.,ಅನಿವಾರ್ಯವಾಗಿ ಸಾಕಷ್ಟು ದೇವಾಲಯಗಳಲ್ಲಿ ವಾರ್ಷಿಕ ಉತ್ಸವವನ್ನು ನಿಲ್ಲಿಸಲೇ ಬೇಕಾಯಿತು. ಅಂತೆಯೇ ಜಗದ್ವಿಖ್ಯಾತ ಒಡಿಸ್ಸಾದ ಪುರಿ ಜಗನ್ನಾಥ ರಥಯಾತ್ರೆಯನ್ನು ನಡೆಸಲು ಈ ಮೊದಲು ಸುರ್ಪೀಂ ಕೋರ್ಟ್ ನಿರಾಕರಿಸಿತ್ತು. ಭಕ್ತಾಧಿಗಳ ಮನದಲ್ಲೂ ಸಹಾ ನೋವು ಮನೆ ಮಾಡಿತ್ತು, ಆದರೂ ಅವರ ಮನದಲ್ಲಿ ಎಲ್ಲೋ ಆಶಾ ಭಾವನೆಯೂ ಇತ್ತು ಇದು ನಡೇದೇ ನಡೆಯುತ್ತದೆ ಎಂದು . ಕಾರಣ ಜಗನ್ನಾಥನ ಮಹಿಮೆ ಅಂತದ್ದು. ಪುರಿ ಜಗನ್ನಾಥ ಶಕ್ತಿ ಕಡಿಮೆಯೇನು ಅಲ್ಲಾ ,ಪವಾಡ ಪ್ರಖ್ಯಾತಿಯನ್ನು ಪಡೆದವನು .ಅಂತೂ ಇ೦ತೂ ತಮ್ಮ ಆದೇಶವನ್ನು ವಾಪಾಸ್ಸು ಪಡೆದು ಕೊಂಡ ಸುರ್ಪೀಂ ಕೋರ್ಟ್ ಸೋಮವಾರ ಷರತ್ತುಬದ್ದ ಅನುಮತಿ ನೀಡಿದೆ.
ಯಾತ್ರೆಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮನವಿ ಮಾಡಿತ್ತು. ಕೋಟ್ಯಂತರ ಜನರ ನಂಬಿಕೆ, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಯಾತ್ರೆ ನಡೆಸಲು ಅನುಮತಿ ಕೊಡುವಂತೆ ಅರ್ಜಿಯಲ್ಲಿ ತಿಳಿಸಿತ್ತು. ಸಾರ್ವಜನಿಕರ ಆರೋಗ್ಯ ಮತ್ತು ನಾಗರಿಕ ಸುರಕ್ಷತೆಯ ಹಿತಾಸಕ್ತಿಯ ಕಾರಣದಿಂದ ಈ ವರ್ಷ ಪುರಿ ರಥಾ ಯಾತ್ರೆಯನ್ನು ಅನುಮತಿ ನೀಡುವುದಿಲ್ಲ ಜೂನ್ 18ರ ಆದೇಶದಲ್ಲಿ ತಿಳಿಸಿತ್ತು. ‘ಯಾತ್ರೆಗೆ ಅವಕಾಶ ನೀಡಿದರೆ ಅದನ್ನು ಜಗನ್ನಾಥ ಕ್ಷಮಿಸುವುದಿಲ್ಲ ಎಂದು ಸಿಜೆಐ ಬೊಬ್ಡೆ ಅವರು ಹೇಳಿದ್ದರು.ಈ ಆದೇಶದ ಬೆನ್ನಲ್ಲೇ ಒಡಿಸ್ಸಾದ ಸರ್ಕಾರ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಕೆಲವು ಮುನ್ನೆಚ್ಚರಿಕ ಕ್ರಮಗಳೊಂದಿಗೆ ಮೆರವಣಿಗೆಯನ್ನು ನಡೆಸಲು ಸಿದ್ಧ ಎಂದು ಒಡಿಸ್ಸಾ ಸರ್ಕಾರ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮನವಿಯನ್ನು ಪುರಸ್ಕರಿಸಿ ಈಗ ಷರತ್ತುಬದ್ಧ ಅನುಮತಿ ನೀಡಿದೆ. ರಥೋತ್ಸವ,ನಿರಂತಕವಾಗಿ ಒಂದು ವಾರ ನಡೇಯಲಿದೆ. ಮಂಗಳವಾರದಿಂದ ಪ್ರಾರಂಭ ಗೊಂಡ ರಥಯಾತ್ರೆಯಲ್ಲಿ ಕೇವಲ ದೇವಸ್ಥಾನದ ಸಿಬ್ಬಂದಿ ಮತ್ತು ಪುರೋಹಿತರು ಮಾತ್ರ ಭಾಗವಹಿಸಿದ್ದರು. ರಥೋತ್ಸವಕ್ಕೆ ಹೆಸರುವಾಸಿಯಾಗಿರುವ ಈ ದೇವಸ್ಥಾನ. ವಿಜ್ಞಾನಕ್ಕೂ ಮೀರಿದ ಅನೇಕ ನಿಗೂಢತೆಯನ್ನು ಹೊಂದಿದೆಯಲ್ಲದೇ ,ಅನೇಕ ವಿಸ್ಮಯಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿರುವ ದೇವಾಲಯ ಪುರಿ ಜಗನ್ನಾಥ .ಈ ದೇವಾಲಯದಲ್ಲಿ ನಡೆಯುತ್ತಿರುವ ಅದ್ಭುತಗಳು ವಿಜ್ಞಾನ ಲೋಕವನ್ನೇ ಬೆಚ್ಚಿಬೀಳಿಸಿದೆ!!ವಿಭಿನ್ನ ವಾಸ್ತುಶಿಲ್ಪಗಳು,ಕೆತ್ತನೆಗಳು ಹಾಗೂ ಪುರಾಣ ಇತಿಹಾಸಗಳ ಅದ್ಭುತ ಹಿನ್ನೆಲೆಯನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ ಇದು ಒಂದು. ವರ್ಷವೀಡೀ ಈ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ.ಜಗದ್ವಿಖ್ಯಾತ ರಥಯಾತ್ರೆಯನ್ನು ಕಣ್ತುಂಬಿ ಕೊಳ್ಳಲು ವೀದೇಶದಿಂದಲೂ ಯಾತ್ರಿಗಳು ಆಗಮಿಸುತ್ತಾರೆ. ಮೂರು ರಥಗಳು ಒಂಬತ್ತು ದಿನಗಳ ಕಾಲ ನಡೇಯುತ್ತದೆ.
ಸುಮಾರು 2.5ಕೀ.ಮೀ ದೂರ ರಥ ಯಾತ್ರೆ ಸಾಗುತ್ತದೆ ಪ್ರತಿವರ್ಷವೂ ನೂತನವಾಗಿಯೇ ರಥವನ್ನು ನಿರ್ಮಾಣ ಮಾಡಲಾಗುತ್ತದೆ, ರಥಕ್ಕಾಗಿ ಸುಮಾರು 23,000 ಸಿ ಎಪ್ ಟಿ ಮರವನ್ನು ತಯಾರಿಕೆಗೆ ಬಳಸುತ್ತಾರೆ.ಇಲ್ಲಿನ ವಿಶೇಷವೆಂದರೆ ಸಾಮಾನ್ಯವಾಗಿ ಪ್ರತಿಯೊಂದು ದೇವಾಲಯದ ಪ್ರತಿಯೊಂದು ದೇವತೆಗಳ ವಿಗ್ರಹವನ್ನು ಕಲ್ಲು ಅಥವಾ ಲೋಹಗಳಿಂದ ಮಾಡಲಾಗುತ್ತದೆ. ಆದರೆ ಪುರಿ ಜಗನ್ನಾಥನ ದೇವಾಲಯದಲ್ಲಿ ಮಾತ್ರ ಜಗನ್ನಾಥ ಸ್ವಾಮಿಯ ವಿಗ್ರಹವು ಮರದಿಂದ ಕೆತ್ತನೆ ಮಾಡಲಾಗಿದೆ, ಈ ವಿಗ್ರಹವನ್ನು ಪ್ರತಿ 12 ವರ್ಷಕ್ಕೊಮ್ಮೆ ಮರದ ವಿಗ್ರಹವನ್ನು ಶಾಸ್ರ್ತೋಕ್ತವಾಗಿ ಬದಲಿಸಲಾಗುತ್ತದೆ. ಪುರಿ ಜಗನ್ನಾಥ ದೇವಾಲಯ ಗೋಪುರದ ಮೇಲೆ ಒಂದು ಧ್ವಜವಿದ್ದೂ, ಈ ಧ್ವಜವು ಯಾವಾಗಲೂ ದೇವಾಲಯದ ಹಿಂಭಾಗದಲ್ಲಿಯೇ ಹಾರಾಡುವುದು ಇಲ್ಲಿನ ವಿಶೇಷವಾಗಿದೆ. ಪ್ರತಿ ದಿನವೂ ಅರ್ಚಕರು 1000 ಅಡಿ ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸುತ್ತಾರೆ. ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯ ತೆರೆಯುವಂತಿಲ್ಲ ಎಂಬ ಪ್ರತೀತಿ ಇದೆ. ಹಾಗಾಗಿ ಈ ದೇಗುಲದ ಪೂಜಾರಿಗಳು ದಿನನಿತ್ಯ ಗೋಪುರದ ಮೇಲ್ಭಾಗದಲ್ಲಿರುವ ಧ್ವಜವನ್ನು ಬದಲಿಸುತ್ತಿರುತ್ತಾರೆ. ಆದರೂ ಕೂಡ ಈ ಧ್ವಜ ಎಂದಿಗೂ ತನ್ನ ದಿಕ್ಕನು ಬದಲಾಯಿಸಿಲ್ಲ. ಸಾಮಾನ್ಯ ವಿಜ್ಞಾನ ಹೇಳುವಂತೆ, ಗಾಳಿ ಬೀಸುವ ದಿಕ್ಕಿನಲ್ಲಿ ಬಾವುಟ ಹಾರಬೇಕು. ಆದರೆ, ಈ ದೇವಾಲಯದ ಗೋಪುರದ ಮೇಲಿನ ಬಾವುಟ ಗಾಳಿಗೆ ವಿರುದ್ಧವಾಗಿ ಹಾರುತ್ತದೆ. ಜಗನ್ನಾಥ ಪ್ರಭಾವದಿಂದಲೇ ಇಂಥದ್ದೊಂದು ಪವಾಡ ನಡೆಯುತ್ತದೆ ಎಂದೇ ಜನರು ನಂಬುತ್ತಾರೆ. ಇನ್ನೊಂದು ವಿಶೇಷವೆಂದರೆ ಎಂಥಹ ಬಿಸಿಲಿದ್ದರೂ ದೇವಾಲಯದ ಗೋಪುರದ ನೆರಳು ಎಂದಿಗೂ ಕಾಣಿಸುವುದಿಲ್ಲ. ಇನ್ನು ಪ್ರಸಾದ ಮಾಡುವ ವಿಧಾನವೂ ಇಲ್ಲಿ ಬಹಳ ವಿಶೇಷವಾಗಿರುತ್ತದೆ. ಏಳು ಮಣ್ಣಿನ ಮಡಕೆಗಳನ್ನು ಪ್ರಸಾದ ತಯಾರಿಸಲು ಬಳಸುತ್ತಾರೆ. ಒಂದರ ಮೇಲೆ ಮತ್ತೊಂದು ಮಡಿಕೆ ಇಟ್ಟು, ಪ್ರಸಾದವನ್ನು ಬೇಯಲು ಇಡುತ್ತಾರೆ. ಆಶ್ಚರ್ಯವೆಂದರೆ ಮೇಲಿನ ಮಡಿಕೆ ಪ್ರಸಾದ ಬೆಂದ ನಂತರ ಕೆಳಗಿನ ಮಡಿಕೆಯ ಪ್ರಸಾದ ಬೇಯುತ್ತದೆ. ಒಟ್ಟಾರೆ ಈ ಎಲ್ಲಾ ವಿಶೇಷತೆಗೆ ಪವಾಡ ಪುರುಷ ಜಗನ್ನಾಥ ಪ್ರಭಾವ ವಲ್ಲದೇ ಮತ್ತಿನ್ನೇನು ? ಜೊತೆಗೆ ಸುಪ್ರಿಂ ಕೊರ್ಟ್ ಮನ ಪರಿವರ್ತನೆಗೂ ಕೂಡಾ!

No comments:

Post a Comment

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...