Wednesday, 21 August 2013

ಅಂಕದ ಕೋಳಿಗಳ ಜಂಭದ ಕಾಳಗ :


ಕರಾವಳಿ ಜಿಲ್ಲೆ ಜಾನಪದ ಕಲೆ ಹಾಗೂ ಜಾನಪದ ಕ್ರೀಡೆಗಳ ತವರೂರು ಎಂದೇ ಹೇಳಬಹುದು. ಭೂತಕೋಲ, ಯಕ್ಷಗಾನ, ಹುಲಿ ಕುಣಿತ, ಮೊದಲಾದವುಗಳು ಇಲ್ಲಿನ ಜಾನಪದ ಕಲೆಗಳಾದರೆ, ಕಂಬಳ, ಕೆಸರುಗದ್ದೆ ಓಟ, ಕೋಳಿ ಅಂಕ ಇವು ಇಲ್ಲಿನ ಜಾನಪದ ಕ್ರೀಡೆಗಳಾಗಿವೆ.
ಜಾಗತೀಕರಣ, ನಗರೀಕರಣಗಳ ಬಿಸಿ ಗಾಳಿಯಿಂದ ಕೆಲವು ಜಾನಪದ ಕ್ರೀಡೆಗಳು ಮರೆ ಮಾಚುತ್ತಾ ಹೋದರೂ, ಕೆಲವೊಂದು ಕ್ರೀಡೆಗಳು ದಿನದಿಂದ ದಿನಕ್ಕೆ ಜನಪ್ರೀಯಗೊಳ್ಳುತ್ತಾ ಸಾಗುತ್ತಿವೆ. ಅವುಗಳಲ್ಲ್ಲಿಕೋಳಿ ಅಂಕ ಅಥವಾ ಕೋಳಿ ಕಾದಾಟದ ಆಟವು ಒಂದು. ತುಳು ಭಾಷೆಯಲ್ಲಿ ಇದನ್ನು ಕೋರಿ ಕಟ್ಟ ಎಂದು ಕರೆಯುತ್ತಾರೆ. ಬಲಿತ ಬಲಿಷ್ಠ ಹುಂಜ ಕೋಳಿಗಳ ಕಾಲಿಗೆ ಹರಿತವಾದ ಸಣ್ಣ ಕತ್ತಿ (ಬಾಲು)ಗಳನ್ನು ಕಟ್ಟಿ ಅವುಗಳನ್ನು ಹೋರಾಟಕ್ಕೆ ಬಿಡುವುದು. ಹುಂಜಗಳು ಕಾದಾಡುವಾಗ ಯಾವ ಹುಂಜ ತನ್ನ ಎದುರಾಳಿಯನ್ನು ಗಾಯಗೊಳಿಸಿ ಹೆಣವಾಗಿಸುವುದೋ ಆ ಹುಂಜ ವಿಜಯಿಯಾದಂತೆ. ಗೆದ್ದ ಹುಂಜದ ಮಾಲಿಕನಿಗೆ ಸೋತ ಹುಂಜದ ಭೂರೀ ಭೋಜನ. ಕೋಳಿ ಅಂಕದ ಗೆಲುವಿಗಾಗಿಯೇ ಅತೀ ಮುತುರ್ವರ್ಜಿವಹಿಸಿ ಕೋಳಿಯನ್ನು ಸಾಕುವುದು ಸಹಜವಾಗಿದೆ.
ಕರಾವಳಿ ತೀರದಲ್ಲಿ ಜಾತ್ರೆ, ನೇಮೋತ್ಸವ, ಅಥವಾ ಇನ್ನಿತರ ಕಾರ್ಯಕ್ರಮಗಳು ನಡೆದ ಮರುದಿನ ಈ ಕೋಳಿ ಅಂಕ ನಡೆಯುವುದು ಪ್ರತೀತಿಯಲ್ಲಿದೆ. ಹವ್ಯಾಸಕೋಸ್ಕರವೂ ನಡೆಯುವುದುಂಟು. ಹಿಂದೆ ಸಿಮಂತ ನಡೆಯುವ ಮನೆಯಲ್ಲಿ ಕೋಳಿ ಅಂಕ ನಡೆಸುವ ಪದ್ಧತಿ ಇತ್ತೆನ್ನಲಾಗಿದೆ. ಹಿರಿಯ ಮೂಡಬಿದಿರೆ ನಿವಾಸಿ ಆನಂದ ಅವರು ಹೇಳುವಂತೆ ಇವತ್ತಿನ ದಿನಗಳಲ್ಲಿ ಕೋಳಿ ಅಂಕ ಎನ್ನುವುದು ಫ್ಯಾಶನ್ ಆಗಿ ಹೋಗಿದೆ. ವಯಸ್ಸಿನ ಮಿತಿಯಿಲ್ಲ. ಇಲ್ಲಿ ಎಳೆ ಪ್ರಾಯದ ಯುವಕರೇ ಹೆಚ್ಚಾಗಿ ಕಾಣುತ್ತಿದ್ದಾರೆ. ಅದೂ ಅಲ್ಲದೆ ಇವತ್ತು ಮುಸ್ಲಿಂ ಕ್ರಿಶ್ಚಿಯನ್ ಎಂಬ ಬೇಧಭಾವವಿಲ್ಲದೆ ಹಲವರು ಈ ಕ್ರೀಡೆಗೆ ಪ್ರಭಾವಿತರಾಗಿದ್ದಾರೆ ಎಂದರೆ ಇದರ ಜನಪ್ರೀಯತೆ ತಿಳಿಯುತ್ತದೆ.

ಕೆಂಪು, ಬಿಳಿ, ಕಪ್ಪು ಹೀಗೆ ಹತ್ತು ಹಲವು ಬಣ್ಣ ಮತ್ತು ಜಾತಿಗಳಿದ್ದು, ಬಿಳಿ ಕೋಳಿಗಳೆಂದರೆ ಹೆಚ್ಚಿನವರಿಗೆ ಅಚ್ಚುಮೆಚ್ಚು. ಬೇಸಿಗೆ ಸೇರಿದಂತೆ ಮಳೆಗಾಲದಲ್ಲೂ ನಡೆಯುವ ಈ ಕ್ರೀಡೆಯ ಕಣಕ್ಕೆ ಕೋಳಿಗಳನ್ನು ಕೊಂಡೊಯ್ಯುವಾಗ ಪಂಚಾಗ ನೋಡುವುದು ಸಹಜ. ಅಮವಾಸ್ಯೆಯ ದಿವಸ ಬಿಳಿ, ಕಪ್ಪು ಮತ್ತು ಹುಣ್ಣಿಮೆ ದಿನ ಕೆಂಪು ಹೀಗೆ ಪ್ರತೀ ದಿನವೂ ಒಂದೊಂದು ರೀತಿಯ ಬಣ್ಣದ ಕೋಳಿಗಳು ವಿಜಯ ಸಾಧಿಸುತ್ತವೆ ಎನ್ನುವಂತಹ ನಂಬಿಕೆ ಜನರಲ್ಲಿದೆ.
ಕರಾವಳಿ ನಾಡಿನ ಪ್ರತೀ ಊರಿನಲ್ಲೂ ನಡೆಯುವಂತಹ ಈ ಕಾಳಗವನ್ನು ನೋಡಲು ಮುಂಬೈ ಸೇರಿದಂತೆ ಇನ್ನಿತರ ದೂರದ ಊರಿನ ಉದ್ಯಮಿಗಳು ಆಗಮಿಸುವುದು ಸಹಜವಾಗಿದೆ. ಕೇವಲ ಪುರುಷರಿಗಾಗಿಯೇ ಇರುವಂತಹ ಕ್ರೀಡೆಯಲ್ಲಿ ದಿನವೊಂದಕ್ಕೆ ಲಕ್ಷಗಟ್ಟಲೆ ಬೆಟ್ಟಿಂಗ್, ಜೂಜು ನಡೆಯುತ್ತದೆ. ಆದರೆ ಬೆಟ್ಟಿಂಗ್ ನಡೆಸಬಾರದು ಎಂಬುವ ನಿಯಮಗಳಿದ್ದರೂ ಅಧಿಕ ಪ್ರಮಾಣದಲ್ಲಿ ನಡೆಯುತ್ತದೆ ಎನ್ನುವುದು ವಿಷಾದನೀಯ ಸಂಗತಿ.

ಒಳ್ಳೆಯ ಆದಾಯ: ಕೆಲವರು ಹಣಗಳಿಸುವುದರಗೋಸ್ಕರವೇ ಅಂಕದ ಕೋಳಿಗಳನ್ನು ಸಾಕುತ್ತಾರೆ. ಸಾಮಾನ್ಯವಾಗಿ ಕೋಳಿಗಳು 250 ರೂ.ನಿಂದ 300 ರೂ.ಗೆ ಮಾರಾಟವಾದರೆ ದಷ್ಟ ಪುಷ್ಠವಾಗಿ ಬಲಿತ ಅಂಕದ ಹುಂಜಗಳು 1,000 ರೂ.ನಿಂದ 10,000ರೂ.ಗಳವರೆಗೆ ಮಾರಾಟವಾಗುತ್ತದೆ.


-ಸಂಗ್ರಹ 

ಚಹಾ, ಕಾಫಿ ಇವುಗಳ ದುಷ್ಪರಿಣಾಮಗಳು:




ಚಹಾ, ಕಾಫಿಗಳಲ್ಲಿ ಹತ್ತು ವಿಧದ ವಿಷಗಳಿರುತ್ತವೆ.
೧. ‘ಟ್ಯಾನಿನ್’ ಎಂಬ ವಿಷವು ಶೇ.೧೮ರಷ್ಟಿರುತ್ತದೆ. ಇದು ಹೊಟ್ಟೆಯಲ್ಲಿ ಛಿದ್ರಗಳನ್ನು ಮತ್ತು ವಾಯುವನ್ನು ನಿರ್ಮಾಣ ಮಾಡುತ್ತದೆ.
೨. ‘ಥಿನ್’ ಎಂಬ ವಿಷವು ಶೇ.೩ರಷ್ಟಿರುತ್ತದೆ. ಇದರಿಂದ ಹುಚ್ಚುತನ ಬರುತ್ತದೆ. ಹಾಗೆಯೇ ಈ ವಿಷವು ಶ್ವಾಸಕೋಶ (ಪುಪ್ಪುಸ) ಮತ್ತು ಮೆದುಳಿನಲ್ಲಿ ಜಡತ್ವವನ್ನು ನಿರ್ಮಿಸುತ್ತದೆ.
೩. ‘ಕೆಫಿನ್’ ಎಂಬ ವಿಷವು ಶೇ.೨.೭೫ರಷ್ಟಿರುತ್ತದೆ. ಇದರಿಂದ ಮೂತ್ರಪಿಂಡಗಳು ದುರ್ಬಲಗೊಳ್ಳುತ್ತವೆ.
೪. ‘ವ್ಯಾಲಾಟೈಲ್’ ಎಂಬ ವಿಷವು ಕರುಳಿನ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.
೫. ‘ಕಾರ್ಬೋನಿಕ್ ಆಮ್ಲ’ದಿಂದ ಆಮ್ಲಪಿತ್ತ (ಆಸಿಡಿಟಿ) ಹೆಚ್ಚಾಗುತ್ತದೆ.
೬. ‘ಪ್ಯಾಮಿನ್’ನಿಂದ ಜೀರ್ಣಶಕ್ತಿಯು ದುರ್ಬಲವಾಗುತ್ತದೆ.
೭. ‘ಆರೋಮೋಲಿಕ್’ ಕರುಳಿನ ಮೇಲೆ ಹಾನಿಕಾರಕ ಪ್ರಭಾವವನ್ನು ಬೀರುತ್ತದೆ.
೮. ‘ಸಾಯನೋಜನ್’ವು ನಿದ್ರಾಹೀನತೆ ಮತ್ತು ಪಾರ್ಶ್ವವಾಯುವಿನಂತಹ ಭಯಾನಕ ರೋಗಗಳನ್ನು ಉಂಟುಮಾಡುತ್ತದೆ.
೯. ‘ಆಕ್ಸೆಲಿಕ್ ಆಮ್ಲ’ವು ಶರೀರಕ್ಕೆ ಅತ್ಯಂತ ಹಾನಿಕರವಾಗಿದೆ.
೧೦. ‘ಸ್ಟಿನಾಯಿಲ್’ವು ರಕ್ತವಿಕಾರ ಮತ್ತು ನಪುಂಸಕತೆಯನ್ನು ನಿರ್ಮಿಸುತ್ತದೆ. ಆದುದರಿಂದ ಚಹಾ ಅಥವಾ ಕಾಫಿಯನ್ನು ಎಂದಿಗೂ ಕುಡಿಯಬಾರದು.

ಚಹಾದ ಮಾಧ್ಯಮದಿಂದ ರಜ-ತಮಗಳನ್ನು ಹೆಚ್ಚಿಸಲು ಅಸುರೀ ಶಕ್ತಿಗಳ ಪ್ರಯತ್ನ!
ಅ. ಚಹಾ ಒಳ್ಳೆಯ ಪೇಯ ಆಗದೇ ಇದ್ದರೂ ಇತರ ಅಪ್ರತಿಮ ಪೇಯಗಳ ತುಲನೆಯಲ್ಲಿ ಚಹಾದ ಇಚ್ಛೆಯನ್ನು ಕಪ್ಪು ಶಕ್ತಿಯ ಆಧಾರದಲ್ಲಿ ನಿರ್ಮಿಸುವುದು ಮತ್ತು ವ್ಯಸನವನ್ನು ತಗಲಿಸಿ ಚಹಾ ಸಂಸ್ಕೃತಿಯನ್ನು ನಿರ್ಮಾಣ ಮಾಡುವುದು: ಮಾಂತ್ರಿಕರ ಯೋಜನೆಯು ಹೇಗಿರುತ್ತದೆ ಎಂಬುದಕ್ಕೆ ಚಹಾ ಒಂದು ಉತ್ತಮ ಉದಾಹರಣೆಯಾಗಿದೆ. ಚಹಾ ಭಾರತೀಯ ಪೇಯವಲ್ಲ. ಕಪ್ಪು ಶಕ್ತಿಯನ್ನು ತೆಗೆದುಕೊಂಡು ಬಂದ ಆಂಗ್ಲರು ಇಲ್ಲಿ ಚಹಾ ಸಂಸ್ಕೃತಿಯನ್ನು ತಂದರು, ಅದರ ಬೀಜವನ್ನು ಬಿತ್ತಿದರು ಮತ್ತು ನಮಗೆ ತಿಳಿಯದಂತೆ ಅದರ ಪ್ರಚಾರವನ್ನು ಮಾಡಿದರು. ಇತರ ಅಪ್ರತಿಮ ಪೇಯಗಳ ತುಲನೆಯಲ್ಲಿ ಚಹಾ ಒಂದು ಉತ್ತಮ ಪೇಯವಾಗದೇ ಇದ್ದರೂ, ಕಪ್ಪು ಶಕ್ತಿಯ ಆಧಾರದ ಮೇಲೆ ಚಹಾದ ಇಚ್ಛೆಯನ್ನು ಜನರ ಮನಸ್ಸಿನಲ್ಲಿ ನಿರ್ಮಿಸಲಾಯಿತು. ನಂತರ ನಮಗೆ ಅದರ ವ್ಯಸನವನ್ನು ತಗಲಿಸಲಾಯಿತು ಮತ್ತು ಚಹಾ ಸಂಸ್ಕೃತಿಯು ಭಾರತದಲ್ಲಿ ನಿರ್ಮಾಣವಾಯಿತು.
ಆ. ಪರಿಸ್ಥಿತಿಯನ್ನು ಬದಲಾಯಿಸುವುದು ಕಠಿಣವಾಗಿದ್ದು, ಅದು ಈಶ್ವರನ ಕೃಪೆ ಮತ್ತು ಅಧಿಷ್ಠಾನದಿಂದಲೇ ಸಾಧ್ಯವಾಗುವುದು: ಕೆಟ್ಟ ಶಕ್ತಿಗಳು ಯಾವುದಾದರೊಂದು ವಿಷಯದ ಆಯೋಜನೆಯನ್ನು ಎಷ್ಟು ವಿಚಾರಪೂರ್ವಕವಾಗಿ ಮಾಡುತ್ತವೆ ಎಂಬುದು ಮೇಲಿನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಅದರ ಪರಿಣಾಮ ಎಷ್ಟು ಮಹತ್ತರವಾಗಿರುತ್ತದೆ ಎಂದರೆ ಪರಿಸ್ಥಿತಿಯನ್ನು ಸಹಜವಾಗಿ ಬದಲಾಯಿಸುವುದೂ ಕಠಿಣವಾಗಿರುತ್ತದೆ.
-ಸಂಗ್ರಹ 

Friday, 9 March 2012

ಹಾಗೆ ಸುಮ್ಮನೆ

ಕಂಪ್ಯೂಟರ್ ಯುಗ ಪ್ರವೇಶಿಸುವ ಮುನ್ನ ಹೀಗಿತ್ತು :
-
ಅಪ್ಲಿಕೇಶನ್ ಅಂದರೆ ನಿರುದ್ಯೋಗಿ ಬರೆಯುವ ಅರ್ಜಿ .
-
ಪ್ರೊಗ್ರಾಮ್ ಅಂದರೆ ಟಿವಿ ಶೋ.
-
ವಿಂಡೋಸ್ ಅಂದರೆ ಕಿಟಕಿ .
-
ಕಿ ಬೋರ್ಡ್ ಅಂದರೆ ಸಂಗೀತ ಉಪಕರಣ .
-
ಹಾರ್ಡ್ ಡ್ರೈವ್ ಅಂದರೆ ತುಂಬಾ ದೂರದ ಪ್ರಯಣ.
-
ಮೌಸ್ ಅಂದರೆ ಇಲಿ .
-
ವೆಬ್ ಅಂದರೆ ಜೇಡರ ಬಲೆ .
-
ವೈರಸ್ ಅಂದರೆ  ಸೂಕ್ಷಾಣು ಜೀವಿ ..

Wednesday, 28 December 2011

ಪಾಸಾಗಲು ಹೇಗೆ ಸಾಧ್ಯ ( just joke )


ಪಾಸಾಗಲು ಹೇಗೆ ಸಾಧ್ಯ  

(ಪರೀಕ್ಷೆಯಲ್ಲಿ ಅನುತ್ತಿರ್ಣ ನಾದ  ಕಾಲೇಜ್ ವಿಧ್ಯಾರ್ಥಿಯನ್ನು  ಕರೆದು ಗುರುಗಳು  ಕಾರಣ ಕೇಳಿದರು .)
 ವಿಧ್ಯಾರ್ಥಿಗಳ ವಿವರಣೆ ಹೀಗಿತ್ತು : ವರ್ಷಕ್ಕೆ ಇರುದು ಕೇವಲ 365 ದಿನಗಳು. ಅದರಲ್ಲಿ 52  ದಿನಗಳು ಭಾನುವಾರ  ವಿಶ್ರಾಂತಿಯ ದಿನಗಳು .ಉಳಿದ 313  ದಿನಗಳಲ್ಲಿ ಬೇಸಿಗೆ ರಜೆ .
50 ದಿನಗಳು ವಿಪರೀತ ಸೆಕೆ  ಓದಲಗೂದಿಲ್ಲ.ಉಳಿದ 263  ದಿನಗಳು ದಿನಕ್ಕೆ ಕನಿಷ್ಠ 8 ಗಂಟೆ ಅಂದರೂ 122  ದಿನ ನಿದ್ದೆ ಯಲ್ಲೇ ಕಳೆಯುತ್ತದೆ .ಉಳಿದ 141 ದಿನದಲ್ಲಿ ದಿನಕ್ಕೆ 1  ಗಂಟೆ ಆಟ ,ವ್ಯಾಯಾಮ ಅಂದರೆ 15  ದಿನ.
ಉಳಿಕೆಯ 126 ದಿನಗಳು. ದಿನಕ್ಕೆ ಊಟ ,ತಿಂಡಿ ಮತ್ತು ನಿತ್ಯ ಕರ್ಮ ಗಳಿಗೆ 2  ಗಂಟೆ ಅಂದರೆ 30  ದಿನಗಳು. ಉಳಿದ 96 ದಿನಗಳು ದಿನಕ್ಕೆ 1 ಗಂಟೆ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಮಾತು ಕತೆಗೆ 15
ದಿನಗಳು. ಉಳಿಕೆ 81  ದಿನ .ವರ್ಷದಲ್ಲಿ ಟೆಸ್ಟ್ ಗಳು ,ಪರಿಕ್ಷದಿನಗಳು  35 ದಿನ. ಉಳಿಯೋದು 46 ದಿನಗಳು .ಹಬ್ಬ ಹರಿದಿನ ,ಮಧ್ಯಕಾಲೀನ ರಜೆ ,ಮುಂತಾದ 40 ಕಳೆದರೆ ಉಳಿಯೋದು 6 ದಿನಗಳು ಕಾಯಿಲೆ ಬೀಳುದು ಕನಿಷ್ಠ
2  ದಿನಗಳು .ಉಳಿದಿರುದು ಒಂದೇ ದಿನ. ದಿನ ನನ್ನ ಬರ್ತ್ ಡೇ. ಇನ್ನು ಓದೋದು ಯಾವಾಗ ? ಪಾಸಾಗಲು ಹೇಗೆ ಸಾಧ್ಯ ? ನೀವೇ ಹೇಳಿ ಸರ್ ಎಂದಾಗ ಗುರುಗಳಿಗೆ  ಸುಸ್ತೋ ಸುಸ್ತೋ ...

ಮಾತೆಂಬ ಮುತ್ತಿನ ಹನಿ

ಮಾತೆಂಬ ಮುತ್ತಿನ ಹನಿ
ಮಾತೆಂಬುದು  ನಮ್ಮ ಭಾವನೆಗಳನ್ನು  ವ್ಯಕ್ತ ಪಡಿಸಿಕೊಳ್ಳಲು  ನಮಗೆ  ದೊರೆತಿರುವ ದೈವದತ್ತ ವರ. ಪ್ರಾಣಿಗಳಿಂದ ಮನುಷ್ಯರನ್ನು ಪ್ರಥ್ಯೇಕರಿಸುವ  ಪ್ರಮುಖ ಲಕ್ಷಣಗಳಲ್ಲಿ  ಇದು ಪ್ರಮುಖವಾದೂದು.ಮಾತು ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುದು ಅಸಾಧ್ಯ .ನಮ್ಮ ದೈನoದಿನ ಹೆಚ್ಚಿನ ಚಟುವಟಿಕೆ ಗಳು ಮಾತಿನ ಮೂಲಕವೇ ನಡೆದು ಹೋಗುತ್ತದೆ .ಮಾತನಾಡುವ ವನಿಗೆ ನಿರ್ದಿಷ್ಟ ವಿಷಯಬೇಕಾಗಿಲ್ಲ.ಮಾತನಾಡುವ ಕೌಶಲ್ಯ ವಿದ್ದರೆ ಸಾಕು.ಆತ ಜಗತ್ತನ್ನೇ ಗೆದ್ದಂತೆ .ಅದರಲ್ಲೂ ಮಾತಿನಲ್ಲಿ ಹೆಚ್ಚು ನಿಪುನರಾದವರೆಂದರೆ ಹೆಂಗಸರು.ಮಾತಿನಲ್ಲಿ ಅವರನ್ನು ಮೀರಿಸುವವರು ಯಾರೂ ಇಲ್ಲ .ಅವರಿಗೆ ಮಾತನಾಡಲು ವಿಷಯಗಳೇ ಬೇಕಾಗಿಲ್ಲ. ದೈನಂದಿನ ಚಟುವಟಿಕೆಗಳೇ ಅವರ ಮಾತಿನ ವಸ್ತುವಾಗಿರುತ್ತದೆ. 'ಮಾತು ಆಡಿದರೆ ಹೋಯ್ತು ,ಮುತ್ತು ಒಡೆದರೆ ಹೋಯ್ತು 'ಎಂಬ ಗಾದೆ ಮಾತಿನಂತೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು .ಮಾತಿನಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೇ ಅಪಾಯವೂ ಇದೆ. ಮಾತನಾಡುವ ಸ್ವಾತಂತ್ರ್ಯ ವಿದೆಯೆಂದು ಬೇಕಾದಂತೆ ಮಾತನಾಡಿದರೆ ಅನಾಹುತಕ್ಕೆ ದಾರಿಯಾಗಬಹುದು .ಮಾತು ನಮ್ಮ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ .ಹಾಗಾಗಿ ಮಾತನಾಡುವಾಗ ಯಾರೊಂದಿಗೆ ಎಲ್ಲಿ .ಹೇಗೆ ಮಾತನಾಡಬೇಕು ಎಂಬ ವಿವೇಕ ವಿದ್ದರೆ ಉತ್ತಮ. ಒಮ್ಮೆ ಆಡಿದ ಮಾತನ್ನು ಮತ್ತೊಮ್ಮೆ ಸರಿಪಡಿಸಲು ಸಾಧ್ಯ.ಆಮೇಲೆ ಪಶ್ಚಯತಾಪ ಪಡುವ ಬದಲು ಮೊದಲೇ ಯೋಚಿಸಿ ಮಾತನಾಡುದು ಒಳಿತು .
ಇಂದಿನ ತಂತ್ರಜ್ಞ ನ ಯುಗದಲ್ಲಿ ಮನುಷ್ಯ ಮೊಬೈಲ್ ,ಕಂಪ್ಯೂಟರ್ ,ಪೇಸ್ ಬುಕ್ ,ಮುಂತಾದ ಮಾಯಾಜಾಲಕ್ಕೆ ಸಿಲುಕಿ ಅದೆಷ್ಟೋ ಸಂಬಂದ ಗಳಿಂದ ದೂರವಾಗಿ ಮೂಕನಂತೆ ಬದುಕಿದ್ದಾನೆ .ಇದೆ ರೀತಿ ಮುಂದುವರಿದರೆ ಮುಂದೊಂದು ದಿನ ಮಾತು ಕಲಿಸುವ ತರಬೇತಿ ಕೇಂದ್ರ ಗಳನ್ನೂ  ತೆರೆಯಬೇಕಾದಿತು. ಹಾಗಾಗಿ ನಾವೆಲ್ಲ ಮಾತಿನ ಮೌಲ್ಯವನರಿತು ಹಿತಮಿತ ಮಾತಿನೊಂದಿಗೆ ಜೀವಿಸೋಣ ..

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...